ಶಾಸಕ ಎಸ್.ವಿ. ರಾಮಚಂದ್ರ, ‘ಕಣ್ವಕುಪ್ಪೆ ಗವಿಮಠವು ಈ ಭಾಗದ ಜನರಿಗೆ ಧಾರ್ಮಿಕ ಕ್ಷೇತ್ರವಾಗಿದೆ. ಆದರೆ, ಕಾಡಿನ ನಡುವೆ ಇರುವುದರಿಂದ ಕರಡಿ ಮತ್ತು ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಮಠಕ್ಕೆ ಬರುವ ಭಕ್ತರು ಭಯಪಡುತ್ತಾರೆ. ಮಠದ ಸುತ್ತಲೂ ತಂತಿಬೇಲಿ ಸೇರಿ ಅಭಿವೃದ್ಧಿಗೆ ಅನುದಾನ ನೀಡಬೇಕು’ ಎಂದು ಸಚಿವರಿಗೆ ಮನವಿ ಸಲ್ಲಿಸಿದರು.