‘ಸಿದ್ದರಾಮಯ್ಯ ಸಿಎಂ ಆಗಲು ಪತ್ರ ನೀಡಿದ್ದೆ’
‘ಸಿದ್ದರಾಮಯ್ಯ ಜನತಾದಳದಲ್ಲಿದ್ದಾಗ ಉಪಮುಖ್ಯಮಂತ್ರಿ ಆಗಿದ್ದರು. ಆಗ ನಾನೂ ಶಾಸಕನಾಗಿದ್ದೆ. ಆಗ ನಾನೇ ಮುಂದಾಳತ್ವ ವಹಿಸಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು 83 ಶಾಸಕರ ಸಹಿ ಹಾಕಿಸಿ ದೇವೇಗೌಡರಿಗೆ ಪತ್ರ ನೀಡಿದ್ದೆ. ಆದರೆ ಆಗ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಆಗುವ ಯೋಗ ಕೂಡಿ ಬರಲಿಲ್ಲ. ಮುಂದೆ ಆದ ರಾಜಕೀಯ ಪಲ್ಲಟಗಳಲ್ಲಿ ಅವರು ನಾನು ಬೇರೆ ಬೇರೆ ಪಕ್ಷಕ್ಕೆ ಹೋಗಬೇಕಾಯಿತು. ಸಿದ್ದರಾಮಯ್ಯ ಈಗಲೂ ಆಪ್ತರುರೆ’ ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು.