‘ಪ್ರಾರ್ಥನೆ ಮುಗಿಸಿದ ಮಕ್ಕಳಿಗೆ ಹಾಲು ವಿತರಣೆ ಮಾಡುತ್ತಿದ್ದೆವು. ಸಿಂಧುಪ್ರಿಯಾ ಲೋಟದಲ್ಲಿ ಹಾಲು ಹಾಕಿಸಿಕೊಂಡು ಹೋಗುವಾಗ ಕಾಲು ಜಾರಿ ಬಿದ್ದಳು. ಆಗ ಮರದ ಮೇಲಿದ್ದ ಮಂಗಗಳು ಅವಳ ಕೈಯಲ್ಲಿದ್ದ ಲೋಟವನ್ನು ಕಸಿದುಕೊಳ್ಳಲು ಮುಂದಾಗಿವೆ. ವಿದ್ಯಾರ್ಥಿನಿ ಗಟ್ಟಿಯಾಗಿ ಲೋಟ ಹಿಡಿದುಕೊಂಡಿದ್ದಾಳೆ. ಮಂಗಗಳು ಮೊಣಕಾಲಿನಲ್ಲಿ ರಕ್ತ ಬರುವಂತೆ ಉಗುರಿನಿಂದ ಕಿತ್ತಿವೆ. ಅಲ್ಲಿದ್ದ ವಿದ್ಯಾರ್ಥಿಗಳು ಭಯದಿಂದ ಓಡಿದ್ದಾರೆ. ನಂತರ ಗ್ರಾಮಸ್ಥರು, ಶಿಕ್ಷಕರು ಮಂಗಗಳನ್ನು ಓಡಿಸಿದ್ದಾರೆ. ವಿದ್ಯಾರ್ಥಿನಿಗೆ ಸಮೀಪದ ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿದ್ದು, ಮೂರು ಹೊಲಿಗೆ ಹಾಕಲಾಗಿದೆ’ ಎಂದು ಮುಖ್ಯಶಿಕ್ಷಕ ಚಂದ್ರಪ್ಪ ತಿಳಿಸಿದರು.