<p><strong>ಹರಿಹರ: </strong>ಜಮಾಅತೆ ಇಸ್ಲಾಮಿ ಹಿಂದ್ ಸ್ಥಳೀಯ ಘಟಕ ನಗರದ ಪ್ರಶಾಂತ ನಗರದ ಮಸ್ಜಿದ್ ಎ ಅಲಿ ಮಸೀದಿಯಲ್ಲಿ ಭಾನುವಾರ ಆಯೋಜಿಸಿದ್ದ ಮಸೀದಿ ದರ್ಶನ ಕಾರ್ಯಕ್ರಮ ಯಶಸ್ವಿಯಾಯಿತು.</p>.<p>ಮುಸ್ಲಿಮೇತರರೂ ಮಸೀದಿಗೆ ಬಂದು ಪರಿಚಯ ಮಾಡಿಕೊಂಡರು.</p>.<p>ಜಮಾಅತೆ ಇಸ್ಲಾಮಿ ಹಿಂದ್ ಸಂಸ್ಥೆಯ ಕರೆಯಂತೆ ಇಡೀ ದೇಶದಲ್ಲಿ ಮಸ್ಜಿದ್ ದರ್ಶನ ನಡೆಯುತ್ತಿದೆ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಮುಸ್ಲಿಮೇತರರೂ ಮಸೀದಿಯ ಪ್ರಕ್ರಿಯೆಯ ಮಾಹಿತಿ ಪಡೆದರು.</p>.<p>ನಮಾಜ್ (ಪ್ರಾರ್ಥನೆ)ಗೆ ಕರೆಯುವ ಅಜಾನ್, ಪ್ರಾರ್ಥನೆಗೆ ಮುನ್ನ ನೆರೆವೇರಿಸುವ ವಜೂ (ಕೈ, ಕಾಲು, ಮುಖ ಸ್ವಚ್ಛಗೊಳಿಸುವ ಪ್ರಕ್ರಿಯೆ), ನಮಾಜ್ ಮಾಡುವ ಹಾಲ್, ಖುತ್ಬಾ (ಪ್ರವಚನ) ನೀಡುವ ಸ್ಥಳ, ಗ್ರಂಥಾಲಯ ಸೇರಿ ಎಲ್ಲ ಮಾಹಿತಿ ಪಡೆದರು.</p>.<p>ಇಸ್ಲಾಂ ಧರ್ಮದ ಮೂಲ ತತ್ವಗಳ ಕುರಿತ ಪುಸ್ತಕಗಳನ್ನು ದರ್ಶನಕ್ಕೆ ಬಂದವರಿಗೆ ನೀಡಲಾಯಿತು.</p>.<p>ಶಾಸಕ ಎಸ್.ರಾಮಪ್ಪ, ಮಾಜಿ ಶಾಸಕರಾದ ಬಿ.ಪಿ.ಹರೀಶ್, ಎಚ್.ಎಸ್.ಶಿವಶಂಕರ್, ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಎಂ.ನಾಗೇಂದ್ರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ.ಹನುಮಂತಪ್ಪ, ದಸಂಸ ಸಂಚಾಲಕ ಪಿ.ಜೆ.ಮಹಾಂತೇಶ್, ಎಕ್ಕಗೊಂದಿ ರುದ್ರಗೌಡ ಭೇಟಿ ನೀಡಿದ್ದರು.</p>.<p>‘20 ಮಹಿಳೆಯರೂ ಸೇರಿ 150 ಮುಸ್ಲಿಮೇತರರು ಭಾಗವಹಿಸಿದ್ದರು’ ಎಂದು ಸಂಸ್ಥೆ ಕಾರ್ಯದರ್ಶಿ ವೈ.ಜಿ.ಅಬ್ದುಲ್ ಖಯೂಂ ಹೇಳಿದರು.</p>.<p>ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರಶಾಂತ್, ‘ಮಸೀದಿಯ ಒಳ ಆವರಣ ಹೇಗಿರುತ್ತದೆ, ಅಲ್ಲಿ ಏನೆಲ್ಲಾ ಮಾಡುತ್ತಾರೆಂಬ ಕುತೂಹಲ ಇತ್ತು. ಕಾರ್ಯಕ್ರಮ ಉಪಯುಕ್ತವಾಗಿದೆ’ ಎಂದರು.</p>.<p>ಸಂಸ್ಥೆ ಅಧ್ಯಕ್ಷ ಡಾ.ಗುಲಾಂ ನಬಿ, ‘ಮುಸ್ಲಿಮರು ಮತ್ತು ಅನ್ಯಧರ್ಮೀಯರ ನಡುವೆ ಸಾಮರಸ್ಯ ಬೆಳೆಸುವ ಉದ್ದೇಶ<br />ದಿಂದ ಹಿಂದ್ ಸಂಸ್ಥೆಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಿರೀಕ್ಷೆಗೂ ಮೀರಿ ಸ್ಪಂದನ ಸಿಕ್ಕಿದೆ’ ಎಂದು ಸಂತಸ ವ್ಯಕ್ತಪಡಿಸಿದರು.</p>.<p>ಸಂಸ್ಥೆಯ ಮುಖ್ತಿಯಾರ್ ಖಾಜಿ, ಸಿರಾಜ್ ಉರ್ ರಹಮಾನ್, ಉಸ್ಮಾನ್ ಖಾನ್, ಉಮರ್ ಫಾರೂಖ್, ಮೊಹ್ಮದ್ ಸಾದಿಕ್, ಬಿ.ಮಗ್ದುಮ್, ವೈ.ಜಿ.ಅಬ್ದುಲ್ ಹೈ, ಡಾ.ನಜೀಬ್ ಉಲ್ಲಾ, ತಾಹೀರ್ ಹುಸೇನ್, ಆರ್.ಸಿ.ಉಬೇದ್ ಉಲ್ಲಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಿಹರ: </strong>ಜಮಾಅತೆ ಇಸ್ಲಾಮಿ ಹಿಂದ್ ಸ್ಥಳೀಯ ಘಟಕ ನಗರದ ಪ್ರಶಾಂತ ನಗರದ ಮಸ್ಜಿದ್ ಎ ಅಲಿ ಮಸೀದಿಯಲ್ಲಿ ಭಾನುವಾರ ಆಯೋಜಿಸಿದ್ದ ಮಸೀದಿ ದರ್ಶನ ಕಾರ್ಯಕ್ರಮ ಯಶಸ್ವಿಯಾಯಿತು.</p>.<p>ಮುಸ್ಲಿಮೇತರರೂ ಮಸೀದಿಗೆ ಬಂದು ಪರಿಚಯ ಮಾಡಿಕೊಂಡರು.</p>.<p>ಜಮಾಅತೆ ಇಸ್ಲಾಮಿ ಹಿಂದ್ ಸಂಸ್ಥೆಯ ಕರೆಯಂತೆ ಇಡೀ ದೇಶದಲ್ಲಿ ಮಸ್ಜಿದ್ ದರ್ಶನ ನಡೆಯುತ್ತಿದೆ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಮುಸ್ಲಿಮೇತರರೂ ಮಸೀದಿಯ ಪ್ರಕ್ರಿಯೆಯ ಮಾಹಿತಿ ಪಡೆದರು.</p>.<p>ನಮಾಜ್ (ಪ್ರಾರ್ಥನೆ)ಗೆ ಕರೆಯುವ ಅಜಾನ್, ಪ್ರಾರ್ಥನೆಗೆ ಮುನ್ನ ನೆರೆವೇರಿಸುವ ವಜೂ (ಕೈ, ಕಾಲು, ಮುಖ ಸ್ವಚ್ಛಗೊಳಿಸುವ ಪ್ರಕ್ರಿಯೆ), ನಮಾಜ್ ಮಾಡುವ ಹಾಲ್, ಖುತ್ಬಾ (ಪ್ರವಚನ) ನೀಡುವ ಸ್ಥಳ, ಗ್ರಂಥಾಲಯ ಸೇರಿ ಎಲ್ಲ ಮಾಹಿತಿ ಪಡೆದರು.</p>.<p>ಇಸ್ಲಾಂ ಧರ್ಮದ ಮೂಲ ತತ್ವಗಳ ಕುರಿತ ಪುಸ್ತಕಗಳನ್ನು ದರ್ಶನಕ್ಕೆ ಬಂದವರಿಗೆ ನೀಡಲಾಯಿತು.</p>.<p>ಶಾಸಕ ಎಸ್.ರಾಮಪ್ಪ, ಮಾಜಿ ಶಾಸಕರಾದ ಬಿ.ಪಿ.ಹರೀಶ್, ಎಚ್.ಎಸ್.ಶಿವಶಂಕರ್, ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಎಂ.ನಾಗೇಂದ್ರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ.ಹನುಮಂತಪ್ಪ, ದಸಂಸ ಸಂಚಾಲಕ ಪಿ.ಜೆ.ಮಹಾಂತೇಶ್, ಎಕ್ಕಗೊಂದಿ ರುದ್ರಗೌಡ ಭೇಟಿ ನೀಡಿದ್ದರು.</p>.<p>‘20 ಮಹಿಳೆಯರೂ ಸೇರಿ 150 ಮುಸ್ಲಿಮೇತರರು ಭಾಗವಹಿಸಿದ್ದರು’ ಎಂದು ಸಂಸ್ಥೆ ಕಾರ್ಯದರ್ಶಿ ವೈ.ಜಿ.ಅಬ್ದುಲ್ ಖಯೂಂ ಹೇಳಿದರು.</p>.<p>ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರಶಾಂತ್, ‘ಮಸೀದಿಯ ಒಳ ಆವರಣ ಹೇಗಿರುತ್ತದೆ, ಅಲ್ಲಿ ಏನೆಲ್ಲಾ ಮಾಡುತ್ತಾರೆಂಬ ಕುತೂಹಲ ಇತ್ತು. ಕಾರ್ಯಕ್ರಮ ಉಪಯುಕ್ತವಾಗಿದೆ’ ಎಂದರು.</p>.<p>ಸಂಸ್ಥೆ ಅಧ್ಯಕ್ಷ ಡಾ.ಗುಲಾಂ ನಬಿ, ‘ಮುಸ್ಲಿಮರು ಮತ್ತು ಅನ್ಯಧರ್ಮೀಯರ ನಡುವೆ ಸಾಮರಸ್ಯ ಬೆಳೆಸುವ ಉದ್ದೇಶ<br />ದಿಂದ ಹಿಂದ್ ಸಂಸ್ಥೆಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಿರೀಕ್ಷೆಗೂ ಮೀರಿ ಸ್ಪಂದನ ಸಿಕ್ಕಿದೆ’ ಎಂದು ಸಂತಸ ವ್ಯಕ್ತಪಡಿಸಿದರು.</p>.<p>ಸಂಸ್ಥೆಯ ಮುಖ್ತಿಯಾರ್ ಖಾಜಿ, ಸಿರಾಜ್ ಉರ್ ರಹಮಾನ್, ಉಸ್ಮಾನ್ ಖಾನ್, ಉಮರ್ ಫಾರೂಖ್, ಮೊಹ್ಮದ್ ಸಾದಿಕ್, ಬಿ.ಮಗ್ದುಮ್, ವೈ.ಜಿ.ಅಬ್ದುಲ್ ಹೈ, ಡಾ.ನಜೀಬ್ ಉಲ್ಲಾ, ತಾಹೀರ್ ಹುಸೇನ್, ಆರ್.ಸಿ.ಉಬೇದ್ ಉಲ್ಲಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>