‘ಆನಂದ ಎಂಬಾತ ನನ್ನ ಪತ್ನಿಗೆ ಮೊಬೈಲ್ ಕರೆ ಮಾಡುವುದು, ಮೆಸೇಜ್ ಕಳುಹಿಸುವ ಮೂಲಕ ಕಿರಿಕಿರಿ ಮಾಡುತ್ತಿದ್ದ. ನವೆಂಬರ್ 8ರ ರಾತ್ರಿ ನಮ್ಮ ಮನೆಯ ಬಳಿ ಬಂದು ನನ್ನ ಪತ್ನಿ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ. ಆಗ ನನ್ನ ತಾಯಿ ಆನಂದನ ಜೊತೆ ಗಲಾಟೆ ಮಾಡಿದ್ದಾರೆ. ಆಗ ಆನಂದ ನನ್ನ ತಾಯಿಯನ್ನು ಕೊಠಡಿಗೆ ಎಳೆದು ಕೊಂಡು ಹೋಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಇದನ್ನು ಬೇರೆಯವರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ನನ್ನ ಪತ್ನಿಗೆ ಬೆದರಿಕೆ ಹಾಕಿದ್ದಾನೆ’ ಎಂದು ಹರೀಶ ದೂರಿನಲ್ಲಿ ತಿಳಿಸಿದ್ದಾರೆ.