ದಾವಣಗೆರೆ: ನ್ಯಾಮತಿ ತಾಲ್ಲೂಕಿನ ಆರುಂಡಿ ಗ್ರಾಮದ ಬಳಿ ರೈತರ ಅಪೇಕ್ಷೆ ಮೇರೆಗೆ ಕಾರು ನಿಲ್ಲಿಸಿ ಹೊಲಕ್ಕೆ ಇಳಿದ ಶಾಸಕ ಎಂ.ಪಿ. ರೇಣುಕಾಚಾರ್ಯ ಹೊಲ ಉತ್ತರು. ಬಳಿಕ ಬಿತ್ತನೆ ನಡೆಸಿದರು.
ಬೆಂಗಳೂರಿನಲ್ಲಿ ಉದ್ಯೋಗ ಮಾಡಿಕೊಂಡಿದ್ದ ರಂಗನಾಥ್ ಅವರು ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಗ್ರಾಮದಲ್ಲೇ ಉಳಿದುಕೊಂಡು ಬೇಸಾಯ ಮಾಡುತ್ತಿದ್ದಾರೆ. ಬುಧವಾರ ರೇಣುಕಾಚಾರ್ಯ ಅವರು ರಂಗನಾಥ್ ಹೊಲದಲ್ಲಿ ಉಳುಮೆ ಮಾಡಿದರು.