ಮಾಯಕೊಂಡದ ಹಾಲಾನಾಯ್ಕ (68) ಶಿಕ್ಷೆಗೆ ಒಳಗಾದವನು. 2017ರ ಡಿಸೆಂಬರ್ನಲ್ಲಿ ಅಣ್ಣನ ಪತ್ನಿ ಲಕ್ಷ್ಮೀಬಾಯಿಯನ್ನು ಕಲ್ಲಿನಿಂದ ಹೊಡೆದು, ತುಳಿದು ಕೊಲೆ ಮಾಡಿದ್ದ. ಗ್ರಾಮಾಂತರ ವೃತ್ತ ಪೊಲೀಸ್ ಇನ್ಸ್ಪೆಕ್ಟರ್ ಗುರುಬಸವರಾಜ್ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕ ನಾಗರಾಜಾಚಾರ್ ವಾದಿಸಿದ್ದರು.