ಚೌಡೇಶ್ವರಿ ದೇವಸ್ಥಾನದ ಪಟ್ಟಿ ಕೇಳುವ ವಿಚಾರದಲ್ಲಿ ಎರಡು ತಂಡಗಳ ನಡುವೆ ಹಿಂದೆ ಗಲಾಟೆ ನಡೆದಾಗ ಸೀಮೆ ಎಣ್ಣೆ ಪರಮೇಶ್ ರಾಜೀ ಪಂಚಾತಿಕೆ ಮಾಡಿ ಕಳುಹಿಸಿದ್ದರು. ಆದರೆ ಎರಡು ತಂಡಗಳ ಮಧ್ಯೆ ದ್ವೇಷ ಹಾಗೇ ಮುಂದುವರಿದಿತ್ತು. ಎರಡು ದಿನಗಳ ಹಿಂದೆ ಒಂದು ತಂಡದ ಗಾರೆ ಮಂಜ, ಟಗರು ಮಂಜ ಮುಂತಾದವರು ಇನ್ನೊಂದು ತಂಡದ ಹನುಮಂತ, ಬಸವರಾಜ ಸಹೋದರರ ಮನೆಗೆ ಬಂದು ಗಲಾಟೆ ಮಾಡಿದ್ದರು. ಮನೆಯಲ್ಲಿ ಹನುಮಂತ, ಬಸವರಾಜ ಇರದೇ ಇದ್ದರೂ ಹೆಣ್ಣುಮಕ್ಕಳೊಂದಿಗೆ ಗಲಾಟೆ ಮಾಡಿ ಹೋಗಿದ್ದರು. ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.