ಆಗಿನ ಹೊನ್ನಾಳಿ ತಾಲ್ಲೂಕಿನ ಕುಂಕುವಾದ ನರಸಿಂಹ ಶಿಕ್ಷೆಗೊಳಗಾದ ಅಪರಾಧಿ. ಹಣಕ್ಕಾಗಿ ಪತ್ನಿ ಹೇಮಾವತಿಯನ್ನು ನಿರಂತರ ಪೀಡಿಸುತ್ತಿದ್ದ. ಹಲವು ಬಾರಿ ಪಂಚಾಯಿತಿ ನಡೆಸಲಾಗಿತ್ತು. ಶೌಚಾಲಯ ನಿರ್ಮಾಣಕ್ಕೆ ಕುಂಕುವಾ ಪಂಚಾಯಿತಿಯಿಂದ 2017ರಲ್ಲಿ ಹೇಮಾವತಿ ಹೆಸರಿಗೆ ₹ 10 ಸಾವಿರ ಹಣ ಮಂಜೂರು ಮಾಡಿತ್ತು. ಆ ಹಣ ನೀಡುವಂತೆ ನರಸಿಂಹ ಕೇಳಿದಾಗ ಪತ್ನಿ ನೀಡಲಿಲ್ಲ ಎಂಬ ಕಾರಣಕ್ಕೆ 2017ರ ಆಗಸ್ಟ್ 16ರಂದು ಹಾರೆಯಿಂದ ಹೊಡೆದಿದ್ದ. ಹೇಮಾವತಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.