ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮಿತ ಸಾಗರ ಮುನಿ ಸಮಾಧಿಮರಣ

Last Updated 20 ಸೆಪ್ಟೆಂಬರ್ 2019, 20:01 IST
ಅಕ್ಷರ ಗಾತ್ರ

ಬೆಳಗಾವಿ: ನಮಿತಸಾಗರ ಮುನಿ ಹುಕ್ಕೇರಿ ತಾಲ್ಲೂಕಿನ ಯರನಾಳದಲ್ಲಿ ಶುಕ್ರವಾರ ಬೆಳಿಗ್ಗೆ ಯಮಸಲ್ಲೇಖನ ವ್ರತಧಾರಣೆ ಮಾಡಿ ಸಮಾಧಿ ಮರಣ ಹೊಂದಿದರು.

ತಮ್ಮ 16ನೇ ವಯಸ್ಸಿನಲ್ಲೇ ಆಚಾರ್ಯ ವರ್ಧಮಾನಸಾಗರ ಮುನಿ ಅವರಿಂದ ಬ್ರಹ್ಮಚರ್ಯ ವ್ರತ ಸ್ವೀಕರಿಸಿದ್ದರು. ತಮ್ಮ ಮುನಿ ಜೀವನದಲ್ಲಿ 3 ಸಾವಿರ ಉಪವಾಸ ವ್ರತ ಹಾಗೂ ಅನೇಕ ನಿಯಮಗಳನ್ನು ಪಾಲಿಸಿದ್ದರು.

ಅಂತ್ಯಕ್ರಿಯೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ಯರನಾಳ, ಹೊಸೂರು, ಹುಕ್ಕೇರಿ, ಬೆಳಗಾವಿ ಮೊದಲಾದ ಕಡೆಗಳಿಂದ ಭಕ್ತರು ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT