<p>ನ್ಯಾಮತಿ: ‘ಬೆಂಕಿ, ನೀರು, ವಿದ್ಯುತ್ ಕುರಿತು ಎಚ್ಚರ ವಹಿಸಿ’ ಎಂದು ಹೊನ್ನಾಳಿ ಅಗ್ನಿಶಾಮಕ ಠಾಣಾಧಿಕಾರಿ ಟಿ.ಆರ್.ಪರಶುರಾಮಪ್ಪ ಮನವಿ ಮಾಡಿದರು.</p>.<p>ಅಗ್ನಿಶಾಮಕ ಸೇವಾ ಸಪ್ತಾಹದ ಅಂಗವಾಗಿ ಶನಿವಾರ ನ್ಯಾಮತಿ ಬೆಸ್ಕಾಂ ಸಿಬ್ಬಂದಿಗೆ ಬೆಂಕಿ ಅವಘಡ, ಸುರಕ್ಷತೆ ಬಗ್ಗೆ ಅರಿವು ಮೂಡಿಸಿ ಮಾತನಾಡಿದರು.</p>.<p>‘ಬೆಂಕಿ ಅವಘಡ ಸಂಭವಿಸಿದ ಸಮಯದಲ್ಲಿ ಸಾರ್ವಜನಿಕರು ಗಾಬರಿಯಾಗದೇ ಸರಿಯಾದ ವಿಳಾಸ, ಹೆಸರು, ದೂರವಾಣಿ ಸಂಖ್ಯೆ, ಯಾವ ರೀತಿಯ ಬೆಂಕಿ ಹಾಗೂ ಮಾರ್ಗವನ್ನು ಸರಿಯಾದ ರೀತಿಯಲ್ಲಿ ತಿಳಿಸಿದರೆ ಹತ್ತಿರದ ಅಗ್ನಿಶಾಮಕ ಠಾಣೆಯಿಂದ ಶೀಘ್ರದಲ್ಲಿ ಅಗ್ನಿಶಾಮಕ ವಾಹನವು ಘಟನಾ ಸ್ಥಳಕ್ಕೆ ಹೋಗಲು ಅನುಕೂಲವಾಗುತ್ತದೆ’ ಎಂದರು.</p>.<p>‘ಈಗಾಗಲೇ ಹೊನ್ನಾಳಿ ತಾಲ್ಲೂಕಿನ ಸುಂಕದಕಟ್ಟೆ ಐಟಿಐ ಮತ್ತು ಪಾಲಿಟೆಕ್ನಿಕ್ ಕಾಲೇಜು, ನ್ಯಾಮತಿಯ ಐಟಿಐ ತರಬೇತಿ ಕೇಂದ್ರ ಹಾಗೂ ನ್ಯಾಮತಿಯ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಲಾಗಿದೆ’ ಎಂದರು.</p>.<p>ಗೃಹರಕ್ಷಕ ದಳದ ತಾಲ್ಲೂಕು ಘಟಕದ ಪ್ಲಟೂನ್ ಎಂ.ರಾಘವೇಂದ್ರ, ವಿ.ಕೆ. ಗದ್ದಿಗೆಯ್ಯ, ಎಲ್. ಗಂಗಾನಾಯ್ಕ, ಬಸವರಾಜ ಅಕ್ಕಣ್ಣನವರ, ಕೆ.ಬಿ. ನಿರಂಜನ, ಭೀಮಸೇನ್, ಪ್ರದೀಪ ಬಟಕುರ್ಕಿ, ಎಲ್.ಬಿ. ಆಂಜನೇಯ, ಎಂ. ವಿನಯ್, ಗೌಡೇಶ ಪಾಟೀಲ್, ಆರ್.ಎಸ್. ಶಶಿಕುಮಾರ, ಸಿದ್ದಪ್ಪ ಕತ್ತಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260419-43-304963924</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನ್ಯಾಮತಿ: ‘ಬೆಂಕಿ, ನೀರು, ವಿದ್ಯುತ್ ಕುರಿತು ಎಚ್ಚರ ವಹಿಸಿ’ ಎಂದು ಹೊನ್ನಾಳಿ ಅಗ್ನಿಶಾಮಕ ಠಾಣಾಧಿಕಾರಿ ಟಿ.ಆರ್.ಪರಶುರಾಮಪ್ಪ ಮನವಿ ಮಾಡಿದರು.</p>.<p>ಅಗ್ನಿಶಾಮಕ ಸೇವಾ ಸಪ್ತಾಹದ ಅಂಗವಾಗಿ ಶನಿವಾರ ನ್ಯಾಮತಿ ಬೆಸ್ಕಾಂ ಸಿಬ್ಬಂದಿಗೆ ಬೆಂಕಿ ಅವಘಡ, ಸುರಕ್ಷತೆ ಬಗ್ಗೆ ಅರಿವು ಮೂಡಿಸಿ ಮಾತನಾಡಿದರು.</p>.<p>‘ಬೆಂಕಿ ಅವಘಡ ಸಂಭವಿಸಿದ ಸಮಯದಲ್ಲಿ ಸಾರ್ವಜನಿಕರು ಗಾಬರಿಯಾಗದೇ ಸರಿಯಾದ ವಿಳಾಸ, ಹೆಸರು, ದೂರವಾಣಿ ಸಂಖ್ಯೆ, ಯಾವ ರೀತಿಯ ಬೆಂಕಿ ಹಾಗೂ ಮಾರ್ಗವನ್ನು ಸರಿಯಾದ ರೀತಿಯಲ್ಲಿ ತಿಳಿಸಿದರೆ ಹತ್ತಿರದ ಅಗ್ನಿಶಾಮಕ ಠಾಣೆಯಿಂದ ಶೀಘ್ರದಲ್ಲಿ ಅಗ್ನಿಶಾಮಕ ವಾಹನವು ಘಟನಾ ಸ್ಥಳಕ್ಕೆ ಹೋಗಲು ಅನುಕೂಲವಾಗುತ್ತದೆ’ ಎಂದರು.</p>.<p>‘ಈಗಾಗಲೇ ಹೊನ್ನಾಳಿ ತಾಲ್ಲೂಕಿನ ಸುಂಕದಕಟ್ಟೆ ಐಟಿಐ ಮತ್ತು ಪಾಲಿಟೆಕ್ನಿಕ್ ಕಾಲೇಜು, ನ್ಯಾಮತಿಯ ಐಟಿಐ ತರಬೇತಿ ಕೇಂದ್ರ ಹಾಗೂ ನ್ಯಾಮತಿಯ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಲಾಗಿದೆ’ ಎಂದರು.</p>.<p>ಗೃಹರಕ್ಷಕ ದಳದ ತಾಲ್ಲೂಕು ಘಟಕದ ಪ್ಲಟೂನ್ ಎಂ.ರಾಘವೇಂದ್ರ, ವಿ.ಕೆ. ಗದ್ದಿಗೆಯ್ಯ, ಎಲ್. ಗಂಗಾನಾಯ್ಕ, ಬಸವರಾಜ ಅಕ್ಕಣ್ಣನವರ, ಕೆ.ಬಿ. ನಿರಂಜನ, ಭೀಮಸೇನ್, ಪ್ರದೀಪ ಬಟಕುರ್ಕಿ, ಎಲ್.ಬಿ. ಆಂಜನೇಯ, ಎಂ. ವಿನಯ್, ಗೌಡೇಶ ಪಾಟೀಲ್, ಆರ್.ಎಸ್. ಶಶಿಕುಮಾರ, ಸಿದ್ದಪ್ಪ ಕತ್ತಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260419-43-304963924</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>