ತಾಲ್ಲೂಕಿನ ಜೀನಹಳ್ಳಿ ಗ್ರಾಮದಲ್ಲಿ ಎ.ಕೆ. ನಾಗರಾಜಪ್ಪ ಎಂಬುವವರಿಗೆ ಸೇರಿದ ಮೇಕೆಯೊಂದನ್ನು ಭಾನುವಾರ ಚಿರತೆ ಕೊಂದು ಹಾಕಿದೆ. ಈ ಕಾರಣ ಚಿರತೆ ಸಂಚರಿಸಿದ ಕತ್ತಿಗೆ ಗ್ರಾಮದ ಹೊರವಲಯದಲ್ಲಿ ಚಿರತೆ ಸೆರೆ ಹಿಡಿಯಲು ಬೋನುಗಳನ್ನು ಅಳವಡಿಸಲಾಗಿದೆ. ಚಿರತೆ ಸೆರೆ ಹಿಡಿಯುವವರೆಗೂ ಜನರು ಎಚ್ಚರಿಕೆಯಿಂದ ಸಂಚರಿಸಬೇಕು. ಸಂಚರಿಸುವಾಗ ಕತ್ತಿ, ಕೋಲನ್ನು ಜತೆಗೆ ಇಟ್ಟುಕೊಳ್ಳಬೇಕು ಎಂದು ಹೊನ್ನಾಳಿ ಆರ್ಎಫ್ಒ ಕೆ.ಆರ್. ಚೇತನ ತಿಳಿಸಿದ್ದಾರೆ.