ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾರದ ಆಸೆ ತೋರಿಸಿ ದರೋಡೆ: ಒಬ್ಬನ ಬಂಧನ

Last Updated 6 ಡಿಸೆಂಬರ್ 2020, 7:41 IST
ಅಕ್ಷರ ಗಾತ್ರ

ಹರಪನಹಳ್ಳಿ: ತಾಲ್ಲೂಕಿನ ಶಿರಗಾನಹಳ್ಳಿ ಕ್ರಾಸ್ ಬಳಿ ಶುಕ್ರವಾರ ರಟ್ಟಿಹಳ್ಳಿಯ ಚಂದ್ರಪ್ಪ ಮತ್ತು ಅವರ ಸ್ನೇಹಿತ ಹೊನ್ನಾಳಿಯ ಕಾಶೀನಾಥ್ ಅವರಿಗೆ ಕಡಿಮೆ ಬೆಲೆಗೆ ಬಂಗಾರ ನೀಡುವುದಾಗಿ ನಂಬಿಸಿ ತಮ್ಮ ಬಳಿಗೆ ಕರೆಯಿಸಿಕೊಂಡ ಅಪರಿಚಿತರು, ಹಲ್ಲೆ ಮಾಡಿ ₹ 2,75,000 ನಗದು, 2 ಮೊಬೈಲ್‍ಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ.

ಆರೋಪಿಗಳಲ್ಲಿ ಮಂಜಪ್ಪನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಲಕ್ಷ್ಮಣ, ರಾಮಪ್ಪ ಸೇರಿ 6 ಮಂದಿ ವಿರುದ್ಧ ದೂರು ದಾಖಲಾಗಿದೆ.

ಘಟನೆಯ ವಿವರ: ಚಂದ್ರಪ್ಪ ಅವರಿಗೆ ಕರೆ ಮಾಡಿದ ಆರೋಪಿಗಳು ₹ 2.75 ಲಕ್ಷ ಕೊಟ್ಟರೆ, ಕಾಲು ಕೆ.ಜಿ. ಬಂಗಾರ ನೀಡುವುದಾಗಿ ನಂಬಿಸಿದ್ದಾರೆ. ಅವರ ಮಾತನ್ನು ನಂಬಿದ ಚಂದ್ರಪ್ಪ, ಸ್ನೇಹಿತ ಕಾಶೀನಾಥ ಅವರನ್ನು ಕರೆದುಕೊಂಡು ತೆಲಿಗಿ ಗ್ರಾಮಕ್ಕೆ ಬಂದಿದ್ದರು. ಅಲ್ಲಿಂದ ಆರೋಪಿಗಳು ಶಿರಗಾನಹಳ್ಳಿ ಕ್ರಾಸ್‍ಗೆ ಕರೆಸಿಕೊಂಡು ಬಂಗಾರ ತೋರಿಸಿ, ಹಣ ಕೊಡುವಂತೆ ಕೇಳಿದರು. ಬಂಗಾರ ಅಸಲಿ ಅಲ್ಲ ಎಂದು ಆಕ್ಷೇಪಿಸಿದಾಗ, ಆರೋಪಿಗಳು ಚಾಕು, ಕಟ್ಟಿಗೆಗಳಿಂದ ಹಲ್ಲೆ ಮಾಡಿ, ಚಂದ್ರಪ್ಪ ಹಾಗೂ ಕಾಶಿನಾಥ್‌ ಅವರ ಬಳಿಯಿದ್ದ ₹ 2.75 ಲಕ್ಷ ನಗದು ಹಾಗೂ ಎರಡು ಮೊಬೈಲ್‍ಗಳನ್ನು ಕಸಿದುಕೊಂಡು ಪರಾರಿಯಾದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಲುವಾಗಲು ಪೊಲೀಸರು ತನಿಖೆ
ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT