ಘಟನೆಯ ವಿವರ: ಚಂದ್ರಪ್ಪ ಅವರಿಗೆ ಕರೆ ಮಾಡಿದ ಆರೋಪಿಗಳು ₹ 2.75 ಲಕ್ಷ ಕೊಟ್ಟರೆ, ಕಾಲು ಕೆ.ಜಿ. ಬಂಗಾರ ನೀಡುವುದಾಗಿ ನಂಬಿಸಿದ್ದಾರೆ. ಅವರ ಮಾತನ್ನು ನಂಬಿದ ಚಂದ್ರಪ್ಪ, ಸ್ನೇಹಿತ ಕಾಶೀನಾಥ ಅವರನ್ನು ಕರೆದುಕೊಂಡು ತೆಲಿಗಿ ಗ್ರಾಮಕ್ಕೆ ಬಂದಿದ್ದರು. ಅಲ್ಲಿಂದ ಆರೋಪಿಗಳು ಶಿರಗಾನಹಳ್ಳಿ ಕ್ರಾಸ್ಗೆ ಕರೆಸಿಕೊಂಡು ಬಂಗಾರ ತೋರಿಸಿ, ಹಣ ಕೊಡುವಂತೆ ಕೇಳಿದರು. ಬಂಗಾರ ಅಸಲಿ ಅಲ್ಲ ಎಂದು ಆಕ್ಷೇಪಿಸಿದಾಗ, ಆರೋಪಿಗಳು ಚಾಕು, ಕಟ್ಟಿಗೆಗಳಿಂದ ಹಲ್ಲೆ ಮಾಡಿ, ಚಂದ್ರಪ್ಪ ಹಾಗೂ ಕಾಶಿನಾಥ್ ಅವರ ಬಳಿಯಿದ್ದ ₹ 2.75 ಲಕ್ಷ ನಗದು ಹಾಗೂ ಎರಡು ಮೊಬೈಲ್ಗಳನ್ನು ಕಸಿದುಕೊಂಡು ಪರಾರಿಯಾದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಲುವಾಗಲು ಪೊಲೀಸರು ತನಿಖೆ
ಕೈಗೊಂಡಿದ್ದಾರೆ.