ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬ್ಬರು ತಳಮಟ್ಟದ ಸ್ವಾಮೀಜಿ, ಮತ್ತೊಬ್ಬರು ಹೈಟೆಕ್: ಶಿವಶಂಕರ್

Last Updated 6 ಜನವರಿ 2021, 6:58 IST
ಅಕ್ಷರ ಗಾತ್ರ

ದಾವಣಗೆರೆ: ಪಂಚಮಸಾಲಿ ಸಮುದಾಯದ ಎರಡು ಪೀಠದ ಸ್ವಾಮೀಜಿಗಳಲ್ಲಿ ಒಬ್ಬರು ಸಮುದಾಯಕ್ಕಾಗಿ ಉಪವಾಸ, ಪಾದಯಾತ್ರೆ ಮಾಡುತ್ತಾ ತಳಮಟ್ಟದ ಸ್ವಾಮೀಜಿ ಆಗಿದ್ದರೆ, ಮತ್ತೊಬ್ಬರು ಫೇಸ್ಬುಕ್, ವಾಟ್ಸ್ ಅ್ಯಪ್ ಗಳ ಮೂಲಕ ಪ್ರಚಾರ ಮಾಡುತ್ತಾ ಹೈಟೆಕ್ ಸ್ವಾಮೀಜಿ ಆಗಿದ್ದಾರೆ ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಹೇಳಿದರು.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹೋರಾಟದ ಬಗ್ಗೆ ಶಿವಶಂಕರ್ ಮನೆಯಲ್ಲಿ ಬುಧವಾರ ಕೂಡಲ ಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರು ಹರಿಹರ ಪೀಠದ ಸ್ವಾಮೀಜಿ ಬಗ್ಗೆ ಪರೋಕ್ಷವಾಗಿ ಟೀಕಿಸಿದರು.

ತಳಮಟ್ಟದ ಹೋರಾಟವೂ ಬೇಕು. ಸಾಮಾಜಿಕ ಮಾಧ್ಯಮಗಳ ಮೂಲಕದ ಪ್ರಚಾರವೂ ಬೇಕು ಎಂದು ತಿಳಿಸಿದರು.
ಸಮುದಾಯಕ್ಜೆ ಒಂದೇ ಪೀಠ ಇರಬೇಕು ಎಂದು ಹಿಂದೆ ತೀರ್ಮಾನವಾಗಿತ್ತು. ಪಟ್ಟಭದ್ರ ಹಿತಾಸಕ್ತಿಗಾಗಿ ಕೆಲವರು ಮತ್ತೊಂದು ಪೀಠ ಆರಂಭಿಸಿದರು. ಸಮಾಜದಲ್ಲಿ ಯಾವುದೇ ಗೊಂದಲವಿಲ್ಲ. ಈಗ ನಡೆಯುತ್ತಿರುವ ಹೋರಾಟ ಪೀಠಕ್ಕಾಗಿ ಅಲ್ಲ. ಸಮುದಾಯದ ಅಭಿವೃದ್ಧಿಗಾಗಿ ಎಂದು ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ವಿಜಯಾನಂದ ಕಾಶಂಪುರ ಹೇಳಿದರು.

ಹರಿಹರದ ಸ್ವಾಮೀಜಿ ವಿಡಿಯೊ ಮೂಲಕ ಬೆಂಬಲ ಸೂಚಿಸಿದ್ದಾರೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT