‘ರಸ್ತೆ ಬದಿಯಲ್ಲಿ ನಡೆದು ಹೋಗುವಾಗ ಆಭರಣವನ್ನು ಸೆರಗಿನಿಂದ ಮುಚ್ಚಿಕೊಳ್ಳಬೇಕು. ಇಲ್ಲದಿದ್ದರೆ, ಕಳ್ಳರು ಅವುಗಳನ್ನು ಕದ್ದೊಯ್ಯುವ ಅಪಾಯ
ವಿದೆ. ಯಾವುದೋ ರೂಪದಲ್ಲಿ ತಮ್ಮ ಗಮನ ಬೇರೆಡೆ ಸೆಳೆದು, ಮೊಬೈಲ್ ಹಾಗೂ ಬ್ಯಾಗ್ಗಳನ್ನೂ ಕಿತ್ತುಕೊಂಡು ಹೋಗುತ್ತಾರೆ. ಹೀಗಾಗಿ, ಅಪರಿಚಿತರು ಏನೇ ಹೇಳಿದರೂ ಆ ಬಗ್ಗೆ ಗಮನ ಕೊಡಬೇಡಿ. ಒಂದೇ ಒಂದು ಅನಾಹುತ ಆಗುವುದು ಕೂಡಾ ನಮಗೆ (ಪೊಲೀಸರಿಗೆ) ಇಷ್ಟವಿಲ್ಲ’ ಎಂದು ಕಿವಿಮಾತು ಹೇಳಿದ್ದರು. ಇದನ್ನುಸೌಮ್ಯಾ ಸಂಗಡಿಗರು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದರು.