‘ಭತ್ತದ ನಾಟಿಗೆ ಒಂದು ತಿಂಗಳು ಪೂರ್ವಭಾವಿಯಾಗಿ ಮಡಿಗಳಲ್ಲಿ ಸಸಿ ಬೆಳೆಸಬೇಕು. ಸುಮಾರು ಒಂದು ಎಕರೆಗೆ 30 ಕೆ.ಜಿ. ಭತ್ತದ ಬೀಜದ ಅವಶ್ಯಕತೆ ಇತ್ತು. ಆದರೆ ಚೆಲ್ಲು ಭತ್ತ ವಿಧಾನದಲ್ಲಿ ಎಕರೆಗೆ ಕೇವಲ 10 ಕೆ.ಜಿ. ಭತ್ತದ ಬೀಜ ಸಾಕು. ಭತ್ತದ ನಾಟಿಗೆ ಕೂಲಿಗಳನ್ನು ಕಾಯಬೇಕು. ಪ್ರತಿ ಎಕರೆಗೆ ₹ 3,500 ನಾಟಿ ಕೂಲಿ ದರ ಇತ್ತು. ಸಮಯಕ್ಕೆ ಸರಿಯಾಗಿ ನಾಟಿ ಕಾರ್ಯ ನಡೆಯುತ್ತಿರಲಿಲ್ಲ. ಈ ಎಲ್ಲ ಒತ್ತಡದಿಂದ ದೂರವಾಗಲು ಚೆಲ್ಲು ಭತ್ತ ವಿಧಾನಕ್ಕೆ ಮೊರೆ ಹೋದೆವು. ತಣಿಗೆರೆ ಗ್ರಾಮದಲ್ಲಿ ಶೇ 90ರಷ್ಟು ರೈತರು ಚೆಲ್ಲು ಭತ್ತ ವಿಧಾನ ಅನುಸರಿಸಿದ್ದಾರೆ’ ಎನ್ನುತ್ತಾರೆ ರೈತ ಜಗದೀಶ್ ದೊಡ್ಮನೆ.