ಕನಸುಗಳು ಸಾಕಾರಗೊಳ್ಳಲು, ಯಶಸ್ಸಿನ ಮೆಟ್ಟಿಲು ತಲುಪಲು ಸಾಧಕರ ಸಾಧನೆಗಳನ್ನು ಅನುಕರಿಸಬೇಕು. ಸದೃಢ ಸಮಾಜ ನಿರ್ಮಾಣ ಒಬ್ಬರಿಂದ ಸಾಧ್ಯವಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು. ಸಾಲು ಮರದ ತಿಮ್ಮಕ್ಕ, ಅಬ್ದುಕ್ ಕಲಾಂ, ಹರೇಕಲ್ ಹಾಜಬ್ಬ, ಎಂ.ಎಸ್.ಸುಬ್ಬಲಕ್ಷ್ಮಿ ರಂತಹ ಸಾಧನೆಗಳು, ಯಶಸ್ವಿ ಮತ್ತು ಆದರ್ಶ ಪ್ರಜೆಗಳಾಗಲು ಸ್ಪೂರ್ತಿ ನೀಡುತ್ತವೆ ಎಂದು ರಾಷ್ಟ್ರೀಯ ತರಬೇತುದಾರ ಕೆ. ರಾಜೇಂದ್ರ ಭಟ್ ತಿಳಿಸಿದರು.