ಖಂಡನೆ: ನೌಕರ ಮಂಜುನಾಥ ಅವರ ಮೇಲೆ ಹಂದಿ ದಾಳಿ ಮಾಡಿದ ಮೂರು ಗಂಟೆವರೆಗೂ ಯಾವುದೇ ಅಧಿಕಾರಿ ಬಾರದೆ ಇರುವುದನ್ನು ನೌಕರರ ಸಂಘದ ಅಧ್ಯಕ್ಷ ಕೆ.ಎಸ್. ಗೋವಿಂದರಾಜ್ ಖಂಡಿಸಿದ್ದಾರೆ. ಮೇಯರ್ ಶೋಭಾ ಪಲ್ಲಾಗಟ್ಟೆ, ಉಪ ಮೇಯರ್ ಚಮನ್ಸಾಬ್, ಸ್ಥಳೀಯ ಪಾಲಿಕೆ ಸದಸ್ಯರಾದ ಗೌರಮ್ಮ ಚಂದ್ರಪ್ಪ, ಲಕ್ಷ್ಮೀದೇವಿ ವೀರಣ್ಣ ಭೇಟಿ ನಿಡಿದ್ದಾರೆ. ಆದರೆ ಆಯುಕ್ತ ಮಂಜುನಾಥ ಆರ್. ಬಳ್ಳಾರಿ ಬರುವವರೆಗೆ ಇತರ ಯಾವ ಅಧಿಕಾರಿಯೂ ಬಂದಿಲ್ಲ ಎಂದು ದೂರಿದರು.