<p><strong>ಮಾಯಕೊಂಡ: ‘</strong>ಒಂದೊಂದು ಬಿಂದಿಗೆ ನೀರು ತರಲೂ ಊರಿನ ಹೊರ ವಲಯದ ತೋಟಗಳ ಮಾಲೀಕರನ್ನು ಕಾಡಿ ಬೇಡಬೇಕು. ಪ್ರತಿ ವರ್ಷ ಬೇಸಿಗೆ ಬರುತ್ತಿದ್ದಂತೆ ನಮ್ಮದು ಇದೇ ಗೋಳು. ಕೂಲಿ ಮಾಡುವ ನಾವೆಲ್ಲ ನೀರು ತರಲೆಂದೇ ಕೆಲಸ ಬಿಟ್ಟು ಹೋಗಬೇಕಾಗಿದೆ... </p>.<p>ಗಂಗನಕಟ್ಟೆ ಸಮೀಪದ ಪಿಸಾರಹಟ್ಟಿ ಗ್ರಾಮದ ಮಹಿಳೆಯರ ನೋವಿನ ನುಡಿಗಳಿವು.</p>.<p>ನೇರ್ಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನಕಟ್ಟೆ ಬಳಿಯ ಪಿಸಾರಹಟ್ಟಿಯಲ್ಲಿ ಅಂದಾಜು 90 ಮನೆಗಳಿದ್ದು, 500ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ಈ ಗ್ರಾಮ ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ.</p>.<p>‘ಚುನಾವಣೆ ಸಮಯದಲ್ಲಿ ಮಾತ್ರ ಗ್ರಾಮಕ್ಕೆ ಭೇಟಿ ನೀಡುವ ಜನಪ್ರತಿನಿಧಿಗಳು ನಂತರ ಇತ್ತ ತಿರುಗಿಯೂ ನೋಡುವುದಿಲ್ಲ. ನಾಲೆಯಿಂದ ಅಥವಾ ಕೊಳವೆಬಾವಿ ಹಾಕಿಸಿ ಕುಡಿಯಲು ನೀರು ಕೊಡಿ ಎಂದು ಗ್ರಾಮ ಪಂಚಾಯಿತಿಯವರಿಗೆ ಕೇಳಿದರೆ ಶಾಸಕರ ಬಳಿ ಹೋಗುವಂತೆ ಹೇಳುತ್ತಾರೆ’ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.</p>.<p>‘ಗಂಗನಕಟ್ಟೆ, ಚಿನ್ನಸಮುದ್ರ ಗ್ರಾಮಗಳಿಗೆ ನಿತ್ಯವೂ ಭದ್ರಾ ಕಾಲುವೆ ನೀರು ಪೂರೈಸಲಾಗುತ್ತದೆ. ಆದರೆ, ಪಿಸಾರಹಟ್ಟಿಗೆ ಕೊಳವೆ ಬಾವಿಯ ನೀರೂ ಇಲ್ಲದಂತಾಗಿದೆ. 50 ಸಾವಿರ ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ಇದೆ. ಆದರೆ, ಅದನ್ನು ಮಳೆಗಾಲದಲ್ಲಿ ಮಾತ್ರ ತುಂಬಿಸುತ್ತಾರೆ. ಬೇಸಿಗೆ ಬಂದರೆ ಅದರಿಂದ ಸಮರ್ಪಕವಾಗಿ ನೀರು ಸಿಗುವುದಿಲ್ಲ. ಆಗೊಮ್ಮೆ ಈಗೊಮ್ಮೆ ನೀರು ಬಿಟ್ಟರೆ ಒಂದೆರಡು ನಲ್ಲಿಗಳಲ್ಲಿ ಜೀವ ಜಲ ಹರಿಯುತ್ತದೆ. ಅದನ್ನು ಪಡೆಯಲು ಜಗಳ ತಪ್ಪಿದ್ದಲ್ಲ. ಸಂಬಂಧಿಕರೇ ಹೆಚ್ಚಾಗಿದ್ದು ನೀರಿಗಾಗಿ ಜಗಳ ಮಾಡಿ ದ್ವೇಷ ಕಟ್ಟಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಅಳಲು ತೋಡಿಕೊಳ್ಳುತ್ತಾರೆ.</p>.<p><strong>ಶಾಲೆ, ಅಂಗನವಾಡಿ ಕೇಂದ್ರಗಳಿಗೂ ನೀರಿಲ್ಲ: </strong>ಪಿಸಾರಹಟ್ಟಿಯಲ್ಲಿನ ಅಂಗನವಾಡಿ ಕೇಂದ್ರದಲ್ಲಿ 33, ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ 31 ವಿದ್ಯಾರ್ಥಿಗಳು ಕಲಿಯುತ್ತಿದ್ದು, ಅವರಿಗೆ ಕುಡಿಯುವ ನೀರು ಒದಗಿಸಲು ಶಿಕ್ಷಕರು ಹೈರಾಣಾಗಿದ್ದಾರೆ. ಅಲ್ಲಿನ ಶೌಚಾಲಯಕ್ಕೆ ಸಮರ್ಪಕವಾಗಿ ನೀರು ಪೂರೈಸಲೂ ಆಗುತ್ತಿಲ್ಲ. ಹೀಗಾಗಿ ಬಯಲೇ ಗತಿ ಎಂಬಂತಾಗಿದೆ. </p>.<p><strong>ಜಮೀನುಗಳ ಬೋರ್ಗಳೇ ಆಸರೆ: </strong>‘ಗ್ರಾಮದ ಸುತ್ತಮುತ್ತಲ ಜಮೀನುಗಳು, ತೋಟದ ಮಾಲೀಕರ ಬಳಿ ಕಾಡಿ ಬೇಡಿ ನೀರು ತರುವ ನಮಗೆ ಕುಡಿಯಲಾದರೂ ನೀರು ಕೊಟ್ಟು ಪುಣ್ಯ ಕಟ್ಟಿಕೊಳ್ಳಿ’ ಎನ್ನುತ್ತಾರೆ ಗಂಗನಕಟ್ಟೆ ಪಿಸಾರಹಟ್ಟಿಯ ನಿವಾಸಿಗಳಾದ ಅಹಮ್ಮದ್, ಸೈಫುಲ್ಲಾ, ರಸೂಲ್, ಬದ್ರೂನಾ ಬೀ, ಅಮೀನಾ, ಫಾತೀಮಾ, ಕಮ್ರೂನ್, ಸಲೀಮಾ ಹಾಗೂ ಇತರರು.</p>.<div><blockquote>ರಂಜಾನ್ ಮಾಸವಿದು. ರೋಜಾ ಮಾಡುತ್ತಿದ್ದೇವೆ. ಎಲ್ಲರೂ ಒಂದೊತ್ತು ನಡೆಸುತ್ತಿದ್ದಾರೆ.ಈಗ ಕುಡಿಯಲೂ ಶುದ್ಧ ನೀರಿಲ್ಲದೇ ಪರದಾಡುವಂತಾಗಿದೆ</blockquote><span class="attribution"> –ಹುಸೇನಾಬೀ ಪಿಸಾರಹಟ್ಟಿ ಗ್ರಾಮಸ್ಥೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಯಕೊಂಡ: ‘</strong>ಒಂದೊಂದು ಬಿಂದಿಗೆ ನೀರು ತರಲೂ ಊರಿನ ಹೊರ ವಲಯದ ತೋಟಗಳ ಮಾಲೀಕರನ್ನು ಕಾಡಿ ಬೇಡಬೇಕು. ಪ್ರತಿ ವರ್ಷ ಬೇಸಿಗೆ ಬರುತ್ತಿದ್ದಂತೆ ನಮ್ಮದು ಇದೇ ಗೋಳು. ಕೂಲಿ ಮಾಡುವ ನಾವೆಲ್ಲ ನೀರು ತರಲೆಂದೇ ಕೆಲಸ ಬಿಟ್ಟು ಹೋಗಬೇಕಾಗಿದೆ... </p>.<p>ಗಂಗನಕಟ್ಟೆ ಸಮೀಪದ ಪಿಸಾರಹಟ್ಟಿ ಗ್ರಾಮದ ಮಹಿಳೆಯರ ನೋವಿನ ನುಡಿಗಳಿವು.</p>.<p>ನೇರ್ಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನಕಟ್ಟೆ ಬಳಿಯ ಪಿಸಾರಹಟ್ಟಿಯಲ್ಲಿ ಅಂದಾಜು 90 ಮನೆಗಳಿದ್ದು, 500ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ಈ ಗ್ರಾಮ ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ.</p>.<p>‘ಚುನಾವಣೆ ಸಮಯದಲ್ಲಿ ಮಾತ್ರ ಗ್ರಾಮಕ್ಕೆ ಭೇಟಿ ನೀಡುವ ಜನಪ್ರತಿನಿಧಿಗಳು ನಂತರ ಇತ್ತ ತಿರುಗಿಯೂ ನೋಡುವುದಿಲ್ಲ. ನಾಲೆಯಿಂದ ಅಥವಾ ಕೊಳವೆಬಾವಿ ಹಾಕಿಸಿ ಕುಡಿಯಲು ನೀರು ಕೊಡಿ ಎಂದು ಗ್ರಾಮ ಪಂಚಾಯಿತಿಯವರಿಗೆ ಕೇಳಿದರೆ ಶಾಸಕರ ಬಳಿ ಹೋಗುವಂತೆ ಹೇಳುತ್ತಾರೆ’ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.</p>.<p>‘ಗಂಗನಕಟ್ಟೆ, ಚಿನ್ನಸಮುದ್ರ ಗ್ರಾಮಗಳಿಗೆ ನಿತ್ಯವೂ ಭದ್ರಾ ಕಾಲುವೆ ನೀರು ಪೂರೈಸಲಾಗುತ್ತದೆ. ಆದರೆ, ಪಿಸಾರಹಟ್ಟಿಗೆ ಕೊಳವೆ ಬಾವಿಯ ನೀರೂ ಇಲ್ಲದಂತಾಗಿದೆ. 50 ಸಾವಿರ ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ಇದೆ. ಆದರೆ, ಅದನ್ನು ಮಳೆಗಾಲದಲ್ಲಿ ಮಾತ್ರ ತುಂಬಿಸುತ್ತಾರೆ. ಬೇಸಿಗೆ ಬಂದರೆ ಅದರಿಂದ ಸಮರ್ಪಕವಾಗಿ ನೀರು ಸಿಗುವುದಿಲ್ಲ. ಆಗೊಮ್ಮೆ ಈಗೊಮ್ಮೆ ನೀರು ಬಿಟ್ಟರೆ ಒಂದೆರಡು ನಲ್ಲಿಗಳಲ್ಲಿ ಜೀವ ಜಲ ಹರಿಯುತ್ತದೆ. ಅದನ್ನು ಪಡೆಯಲು ಜಗಳ ತಪ್ಪಿದ್ದಲ್ಲ. ಸಂಬಂಧಿಕರೇ ಹೆಚ್ಚಾಗಿದ್ದು ನೀರಿಗಾಗಿ ಜಗಳ ಮಾಡಿ ದ್ವೇಷ ಕಟ್ಟಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಅಳಲು ತೋಡಿಕೊಳ್ಳುತ್ತಾರೆ.</p>.<p><strong>ಶಾಲೆ, ಅಂಗನವಾಡಿ ಕೇಂದ್ರಗಳಿಗೂ ನೀರಿಲ್ಲ: </strong>ಪಿಸಾರಹಟ್ಟಿಯಲ್ಲಿನ ಅಂಗನವಾಡಿ ಕೇಂದ್ರದಲ್ಲಿ 33, ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ 31 ವಿದ್ಯಾರ್ಥಿಗಳು ಕಲಿಯುತ್ತಿದ್ದು, ಅವರಿಗೆ ಕುಡಿಯುವ ನೀರು ಒದಗಿಸಲು ಶಿಕ್ಷಕರು ಹೈರಾಣಾಗಿದ್ದಾರೆ. ಅಲ್ಲಿನ ಶೌಚಾಲಯಕ್ಕೆ ಸಮರ್ಪಕವಾಗಿ ನೀರು ಪೂರೈಸಲೂ ಆಗುತ್ತಿಲ್ಲ. ಹೀಗಾಗಿ ಬಯಲೇ ಗತಿ ಎಂಬಂತಾಗಿದೆ. </p>.<p><strong>ಜಮೀನುಗಳ ಬೋರ್ಗಳೇ ಆಸರೆ: </strong>‘ಗ್ರಾಮದ ಸುತ್ತಮುತ್ತಲ ಜಮೀನುಗಳು, ತೋಟದ ಮಾಲೀಕರ ಬಳಿ ಕಾಡಿ ಬೇಡಿ ನೀರು ತರುವ ನಮಗೆ ಕುಡಿಯಲಾದರೂ ನೀರು ಕೊಟ್ಟು ಪುಣ್ಯ ಕಟ್ಟಿಕೊಳ್ಳಿ’ ಎನ್ನುತ್ತಾರೆ ಗಂಗನಕಟ್ಟೆ ಪಿಸಾರಹಟ್ಟಿಯ ನಿವಾಸಿಗಳಾದ ಅಹಮ್ಮದ್, ಸೈಫುಲ್ಲಾ, ರಸೂಲ್, ಬದ್ರೂನಾ ಬೀ, ಅಮೀನಾ, ಫಾತೀಮಾ, ಕಮ್ರೂನ್, ಸಲೀಮಾ ಹಾಗೂ ಇತರರು.</p>.<div><blockquote>ರಂಜಾನ್ ಮಾಸವಿದು. ರೋಜಾ ಮಾಡುತ್ತಿದ್ದೇವೆ. ಎಲ್ಲರೂ ಒಂದೊತ್ತು ನಡೆಸುತ್ತಿದ್ದಾರೆ.ಈಗ ಕುಡಿಯಲೂ ಶುದ್ಧ ನೀರಿಲ್ಲದೇ ಪರದಾಡುವಂತಾಗಿದೆ</blockquote><span class="attribution"> –ಹುಸೇನಾಬೀ ಪಿಸಾರಹಟ್ಟಿ ಗ್ರಾಮಸ್ಥೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>