ತಕ್ಷಣ ಸಿಗದ ಚಿಕಿತ್ಸೆ- ಆಸ್ಪತ್ರೆಗಳಿಗೆ ಅಲೆದಾಟ:ಹಿರಿಯೂರು ಮತ್ತು ಚಿತ್ರದುರ್ಗ ಹಾಗೂ ದಾವಣಗೆರೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ತ್ವರಿತವಾಗಿ ಸಿಗಲಿಲ್ಲ. ವೈದ್ಯರು, ದಾದಿಯರು ಸರಿಯಾಗಿ ಸ್ಪಂದಿಸಲಿಲ್ಲ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಯಿತು. ಅಸ್ವಸ್ಥರನ್ನು ಆಸ್ಪತ್ರೆಯಿಂದ ಆಸ್ಪತ್ರೆಗೆ ಸಾಗಿಸುವಲ್ಲಿಯೇ ಸಮಯ ವ್ಯರ್ಥವಾಯಿತು. ಸರಿಯಾದ ಚಿಕಿತ್ಸೆ ಸಿಕ್ಕಿದ್ದರೆ ಎಲ್ಲರನ್ನೂ ಉಳಿಸಿಕೊಳ್ಳಬಹುದಾಗಿತ್ತು ಎಂದು ಸಂಬಂಧಿ ಮನೋಹರ ಆಕ್ರೋಶ ವ್ಯಕ್ತಪಡಿಸಿದರು.