ದಾವಣಗೆರೆ: ಯುವಕನ ಕೊಲೆಯಾಗಿದೆ ಎಂದು ತನ್ನ ಮುಖಕ್ಕೆ ಕುಂಕುಮದ ನೀರು ಹಾಕಿ, ಸತ್ತು ಬಿದ್ದವರಂತೆ ಮಲಗಿ ಸೆಲ್ಫಿ ತೆಗೆದು ಸಾಮಾಜಿಕ ಜಾಲ ತಾಣಗಳಲ್ಲಿ ಕಳುಹಿಸಿದ್ದ ಯುವಕನನ್ನು ಬಡಾವಣೆ ಪೊಲೀಸರು ಬಂಧಿಸಿದ್ದಾರೆ. ನಗರದಲ್ಲಿ 10 ದಿನಗಳ ಒಳಗೆ ಮೂರು ಕೊಲೆಗಳು ನಡೆದಿದ್ದ ಕಾರಣ ಮೊದಲೇ ಒತ್ತಡದಲ್ಲಿದ್ದ ಪೊಲೀಸರು ಈ ‘ಕೊಲೆ’ಯಿಂದ ಇನ್ನಷ್ಟು ತಲೆಬಿಸಿಯಲ್ಲಿದ್ದರು. ಇದು ನಕಲಿ ಕೊಲೆ ಎಂಬುದನ್ನು ಪತ್ತೆ ಹಚ್ಚಿ ಸ್ವಲ್ಪ ನಿರುಮ್ಮಳರಾದರು.