ರೈತ ಶಿವಣ್ಣ ಮಾತನಾಡಿ, ‘ನಮ್ಮ ಭಾಗದಲ್ಲಿ ನಾಲೆ ಆಧುನೀಕರಣ ಆದ ದಿನದಿಂದ ನಾಲೆಯಲ್ಲಿ ತುಂಬಿರುವ ಹೂಳು ಮತ್ತು ಜಂಗಲ್ ಸ್ವಚ್ಛಗೊಳಿಸಿಲ್ಲ. ಜಾಲಿ ಗಿಡಗಳು ಬೆಳೆದು ನೀರು ಹರಿಯಲು ಇದು ತೊಡಕಾಗಿದೆ. ಈ ಸಂಬಂಧ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸಲು ನಿರ್ದೇಶನ ನೀಡಬೇಕು. ಈ ಭಾಗದಲ್ಲಿ ಭದ್ರಾ ಕಾಡಾದಿಂದ ಅಚ್ಚುಕಟ್ಟು ರಸ್ತೆಗಳು, ಹೊಲಗಾಲುವೆ ಅಭಿವೃದ್ಧಿ ಆಗಬೇಕು. ಅದಕ್ಕೆ ಅನುದಾನ ಒದಗಿಸಬೇಕು’ ಎಂದು ಕೋರಿದರು.