ಬೆಂಗಳೂರಿನ ಪ್ರಾಣಿ ದಯಾ ಸಂಸ್ಥೆಯವರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು,ಸ್ಥಳೀಯರಾದ ಎಂ.ಜಿ. ಶ್ರೀಕಾಂತ್, ಹಿಂದೂ ಜಾಗರಾಣ ವೇದಿಕೆಯ ಸತೀಶ್ ಪೂಜಾರಿ ಹಾಗೂ ರಾಕೇಶ್, ವಿಕಾಸ್ ಇಟಗಿ, ಪುರುಷೋತ್ತಮ, ತಿಪ್ಪೇಶ್ ಅವರು ನೆರವು ನೀಡಿದ್ದರು. ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರ್ಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರ ವೃತ್ತ ನಿರೀಕ್ಷಕ ಗಜೇಂದ್ರಪ್ಪ, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.