ಪೈಗಂಬರ್ ಅವರ ವಿರುದ್ಧ ಹೇಳಿಕೆ ನೀಡುವ ಮೂಲಕ ದೇಶದಲ್ಲಿ ಅಶಾಂತಿ ವಾತಾವರಣ ಸೃಷ್ಟಿ ಮಾಡಲಾಗಿದೆ. ಇಂತಹ ಹಲವಾರು ಪ್ರಕರಣಗಳು ನಡೆಯುತ್ತಲೇ ಇವೆ. ಆದರೆ ಇಂತಹ ಪ್ರಚೋದನೆ ಹೇಳಿಕೆ ನೀಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಹೀಗಾಗಿಯೇ ದೇಶಾದ್ಯಂತ ಪ್ರತಿಭಟನೆಗಳು, ಹೋರಾಟಗಳು ನಡೆಯುತ್ತಿವೆ ಎಂದರು. ಟಾರ್ಗೆಟ್ ಮೊಹಮ್ಮದ್ ಅಸ್ಲಂ, ಸೈಯದ್ ಮೊಹಮ್ಮದ್ ಖಾದ್ರಿ (ಮುನ್ನ) ಯಾಕೂಬ್ ಕೊಟ್ಟೂರು, ಸೈಯದ್ ಜಾಕೀರ್, ಶೇಖ್ ಆಜಂ, ವಾಜೀದ್, ಇಖ್ಬಾಲ್, ಮೊಹಮ್ಮದ್ ಸಮೀರ್, ಮೆಹಬೂಬ್ (ಬೀಡ) ಜಬಿಉಲ್ಲಾ, ಇನಾಯತ್ ಅಲಿ ಖಾನ್ ಇದ್ದರು.