ರೈಲ್ವೆ ಎಡಿಜಿಪಿ ಭಾಸ್ಕರ್ ರಾವ್ ಅವರ ಆದೇಶದ ಮೇರೆಗೆ ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ ಸಿರಿಗೌರಿ, ಹಾಗೂ ರೈಲ್ವೆ ಪೋಲಿಸ್ ಉಪ ವರಿಷ್ಠಾಧಿಕಾರಿ ಡಿ.ಆಶೋಕ ಮಾರ್ಗದರ್ಶನದಲ್ಲಿ ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯ ಮುಸ್ತಾಕ್ ಅಹಮ್ಮದ್ ಡಿ. ಶೇಖ್ ಮತ್ತು ಠಾಣಾ ಸಿಬ್ಬಂದಿ ಗುರುವಾರ ವಿಸಿಟಿಂಗ್ ಕಾರ್ಡ್ಳನ್ನು ರೈಲು ಪ್ರಯಾಣಿಕರಿಗೆ ನೀಡಿದರು. ‘ಪ್ರಯಾಣಿಕರ ಸುರಕ್ಷತೆ ನಮ್ಮ ಹೊಣೆ’ ಎಂಬ ಸಂದೇಶವನ್ನು ಸಾರಿದರು.