ದಾವಣಗೆರೆ: ಮತ ಎಣಿಕೆಯ ಕೊನೇಯ ಸುತ್ತು (19) ಮುಗಿಯುತ್ತಿದ್ದಂತೆ ಮಳೆ ಸುರಿಯಿತು. ಬಿಜೆಪಿಯ ಗೆಲುವಿಗೆ ಸಿಂಚನವಾಯಿತು ಎಂದು ಬಿಜೆಪಿ ನಾಯಕರು ಸಂಭ್ರಮಿಸಿದರು. ಬಿಸಿಲಲ್ಲಿ ಕಾಯುತ್ತಾ ನಿಂತಿದ್ದ ಪೊಲೀಸರು, ಭದ್ರತಾ ಪಡೆಗಳ ಸಿಬ್ಬಂದಿ ಮಳೆ ಬರುತ್ತಿದ್ದಂತೆ ನೀರು ಬೀಳದ ಜಾಗ ಹುಡುಕಿ ಹೋಗಬೇಕಾಯಿತು.
ಗುಡುಗು, ಮಿಂಚಿನೊಂದಿಗೆ ಅರ್ಧ ಗಂಟೆಗೂ ಹೆಚ್ಚು ಹೊತ್ತು ಮಳೆ ಸುರಿಯಿತು. ಅಲ್ಲಲ್ಲಿ ಹಾಕಿದ್ದ ಶಾಮಿಯಾನಗಳ ಅಡಿಗೆ ಆರಂಭದಲ್ಲಿ ಓಡಿದರು. ಶಾಮಿಯಾನಗಳೂ ಸೋರ ತೊಡಗಿದಾಗ ಕಟ್ಟಡಗಳ ಒಳಗೆ ಹೋಗಬೇಕಾಯಿತು.