ಜುಲೈ ತಿಂಗಳೊಂದರಲ್ಲಿಯೇ ಬರೋಬ್ಬರಿ 169 ಮಿ.ಮೀ.ಮಳೆ ಸುರಿದಿದೆ. ಆದರೆ, ಆಗಸ್ಟ್ ತಿಂಗಳಲ್ಲಿ ವರುಣನ ಅವಕೃಪೆಯಿಂದಾಗಿ ಮೆಕ್ಕೆಜೋಳ, ಈರುಳ್ಳಿ ಬೆಳೆಗಳು ಬಾಡುತ್ತಿವೆ. ಚಿಗಟೇರಿ, ತೆಲಿಗಿ ಮತ್ತು ಹರಪನಹಳ್ಳಿ ಕಸಾಬ ಹೋಬಳಿಯಲ್ಲಿ ಅರ್ಧದಷ್ಟು ಮೆಕ್ಕೆಜೋಳದ ಬೆಳೆ ಒಣಗುತ್ತಿದೆ. ಅರಸೀಕೆರೆಯಲ್ಲಿ ಆಗಾಗ ಅಲ್ಪ ಮಳೆಯಾಗಿದ್ದು, ಬೆಳೆಗಳು ಹಸಿರಾಗಿವೆ. ಸಾಧಾರಣ ಇಳುವರಿಯನ್ನು ಮಾತ್ರ ರೈತರು ನಿರೀಕ್ಷಿಸಿದ್ದಾರೆ.