ತಾಂಡಾದ ಯುವಕರು ಕಪ್ಪೆಗಳನ್ನು ತಂದು ಮದುವೆ ಹೆಣ್ಣು-ಗಂಡಿನಂತೆ ಶೃಂಗಾರ ಮಾಡಿ ಮದುವೆ ಮಾಡಿದರು. ಬೇವಿನ ಉಡುಗೆ ತೊಟ್ಟ ಇಬ್ಬರು ಬಾಲಕರು ಕಪ್ಪೆಗಳನ್ನು ಕೋಲಿನ ಎರಡು ಬದಿಯಲ್ಲಿ ಕಟ್ಟಿಕೊಂಡು ಬಾರೊ ಬಾರೊ ಮಳೆರಾಯ, ಬಾಳೆಯ ತೋಟಕ್ಕೆ ನೀರಿಲ್ಲ ಎಂದು ಹಾಡುತ್ತಾ ಗ್ರಾಮದ ಮನೆ ಮನೆಗೆ ತೆರಳಿದರು. ಇವರಿಗೆ ಯುವಕರ ತಂಡ ಸಹಕಾರ ನೀಡಿದರು. ಮನೆ ಮುಂದೆ ಬಂದ ನವ ವಿವಾಹಿತ ಕಪ್ಪೆಗಳಿಗೆ ನೀರು ಹಾಕಿ ಪೂಜೆ ಸಲ್ಲಿಸಿ ಯುವಕರ ತಂಡಕ್ಕೆ ದೇಣಿಗೆ ರೂಪದಲ್ಲಿ ಹಣ ಆಹಾರ ಪದಾರ್ಥಗಳನ್ನು ನೀಡಿ ಸಹಕರಿಸಿದರು. ಗ್ರಾಮದಲ್ಲಿ ಮೆರವಣಿಗೆ ಮುಗಿಸಿದ ಬಳಿಕ ಕಪ್ಪೆಗಳನ್ನು ಕೆರೆಯಲ್ಲಿ ವಿಸರ್ಜಿಸಲಾಯಿತು.