ಉಚ್ಚಂಗಿದುರ್ಗ, ಹಿರೇಮೆಗಳಗೆರೆ, ಚಟ್ನಿಹಳ್ಳಿ ಭಾಗದ ರೈತರು ಗೋಕಟ್ಟೆ, ಕೃಷಿ ಹೊಂಡ, ಕಲ್ಲಿನ ಕ್ವಾರಿಗಳಲ್ಲಿಯ ನೀರನ್ನು ಬೆಳೆಗಳಿಗೆ ಮೋಟರ್ಗಳ ಮೂಲಕ ಬೆಳೆಗಳಿಗೆ ನೀರು ಹರಿಸಲಾಗುತ್ತಿದೆ. ಪುಣಭಘಟ್ಟ, ಅರಸೀಕೆರೆ, ತವಡೂರು, ಲಕ್ಷ್ಮೀಪುರ, ಹೊಸಕೋಟೆ, ಕಂಚಿಕೆರೆ ಭಾಗದ ರೈತರು ಕೊಳವೆ ಬಾವಿ ಆಶ್ರಿತ ರೈತರಿಂದ ಹೊಂದಾಣಿಕೆ ಆಧಾರದಲ್ಲಿ ನೀರು ಪಡೆದು ಬೆಳೆಗಳಿಗೆ ಉಣಿಸುತ್ತಿದ್ದಾರೆ.