ರಥೋತ್ಸವ: ಏ.14 ರಂದು ಮುಂಜಾನೆ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ನಡೆಯಲಿದ್ದು, ಮಧ್ಯಾಹ್ನ ಮುಳ್ಳುಪಲ್ಲಕ್ಕಿ ಹಾಗೂ ಎದುರುಗತ್ತಿ ಪವಾಡಗಳು ನಡೆಯಲಿವೆ. ಏ. 15 ರಂದು ಓಕಳಿಯೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರಬೀಳಲಿದೆ ಎಂದು ಗುಡೆಗೌಡ ಚಂದ್ರಪ್ಪ ತಿಳಿಸಿದರು. ಪ್ರಧಾನ ಅರ್ಚಕ ಸಂಪತ್ ಕುಮಾರ್, ಸೀತಾರಾಮ್, ಗೋಪಿ ಇದ್ದರು.