‘ಪೊಲೀಸರು ನಾಲ್ಕೈದು ದಿನ ಏನು ಮಾಡಿಯೇ ಇಲ್ಲ. ನಮ್ಮ ಪಕ್ಷದ ಮುಖಂಡರಾದ ಪುರಸಭೆ ಅಧ್ಯಕ್ಷ ರಂಗಪ್ಪ, ಕುಳಗಟ್ಟೆ ರಂಗಪ್ಪ, ಅರಕೆರೆ ನಾಗರಾಜ್ ಇತರರು ಸೇರಿ ಏಳೆಂಟು ಜನ ಡ್ರೋಣ್ ಕ್ಯಾಮೆರಾ ತರಿಸಿ ಪರಿಶೀಲಿಸಿದಾಗ ತುಂಗಾ ನಾಲೆ ಬಳಿಯೇ ಕಾರಿನ ಕೆಲ ಬಿಡಿಭಾಗಗಳು ಪತ್ತೆಯಾಗಿವೆ. ನಂತರ ಕಾರು ಪತ್ತೆಯಾಗಿದೆ. ಇದನ್ನು ಪತ್ತೆ ಹಚ್ಚಿದ್ದು ನಮ್ಮ ಕಾರ್ಯಕರ್ತರು, ಪೊಲೀಸರಲ್ಲ’ ಎಂದು ರೇಣುಕಾಚಾರ್ಯ ಕಿಡಿಕಾರಿದರು.