ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆರೆ ಸರ್ವೆಗೆ 6ತಿಂಗಳ ಹಿಂದೆಯೇ ₹ 11 ಲಕ್ಷ ಅನುದಾನ ಬಂದಿದ್ದರೂ ಇನ್ನೂ ಸರ್ವೆ ಆಗಿಲ್ಲ. ಅಧಿಕಾರಿಗಳು ಕುಂಟು ನೆಪ ಹೇಳುತ್ತಿದ್ದಾರೆ. ಶೀಘ್ರ ಸರ್ವೆ ಮಾಡಬೇಕು. 2014ರ ಬಳಿಕ ಈಚೆಗೆ ಸುರಿದ ಮಳೆಗೆ ಕೆರೆ ಕೋಡಿ ಬಿದ್ದಿದ್ದು, ಹಾನಿಯಾದ ರೈತರಿಗೆ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.