‘ಶ್ಯಾಗಲೆ ಗ್ರಾಮಕ್ಕೆ ಖಾಸಗಿ ಬಸ್ಗಳು ಸಂಚರಿಸುತ್ತಿದ್ದು, ಪ್ರಯಾಣ ದರ ದುಬಾರಿಯಾಗಿದೆ. ಶ್ಯಾಗಲೆ, ಲೋಕಿಕೆರೆ, ಯರವನಾಗತಿಹಳ್ಳಿ ಕ್ಯಾಂಪ್, ಕೋಲ್ಕುಂಟೆ, ಕಲ್ಬಂಡೆ, ತುರ್ಚಗಟ್ಟ, ಬೆಳವನೂರು ಗ್ರಾಮಗಳಿಂದ ಬಡ ರೈತರು, ಕೂಲಿ ಕಾರ್ಮಿಕರ ಮಕ್ಕಳು ವಿದ್ಯಾಭ್ಯಾಸಕ್ಕೆ ದಾವಣಗೆರೆಗೆ ನಗರಕ್ಕೆ ಬರುತ್ತಿದ್ದಾರೆ. ಸರ್ಕಾರಿ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಬಡ ವಿದ್ಯಾರ್ಥಿ- ಕುಟುಂಬಗಳಿಗೆ ತೊಂದರೆ ಆಗುತ್ತಿದೆ’ ಎಂದು ವಿದ್ಯಾರ್ಥಿನಿಯರು ಅಳಲು ತೋಡಿಕೊಂಡರು.