ದಾವಣಗೆರೆ: ಇಲ್ಲಿನಬೇತೂರು ರಸ್ತೆಯಲ್ಲಿ ಗುರುವಾರ ಮಣ್ಣುಮುಕ್ಕ ಹಾವನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಒಬ್ಬನನ್ನು ಬಂಧಿಸಿ ಹಾವನ್ನು ವಶಪಡಿಸಿಕೊಂಡಿದ್ದಾರೆ.
ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆ ಗ್ರಾಮದ ಮಂಜಪ್ಪ ಬಂಧಿತ. ಕಳೆದ ತಿಂಗಳು ಹರಿಹರದ ವಸತಿಗೃಹವೊಂದರಲ್ಲಿ ಮಾರಾಟ ಮಾಡುತ್ತಿದ್ದ ಮಣ್ಣುಮುಕ್ಕ ಹಾವನ್ನು ವಶಪಡಿಸಿಕೊಳ್ಳಲಾಗಿತ್ತು. ಹಾವನ್ನು ನ್ಯಾಯಾಧೀಶರ ಮುಂದೆ ತಂದು, ಕಾಡಿಗೆ ಬಿಡಲಾಗುತ್ತದೆ. ತನಿಖೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಈ ಹಾವು ದೈವಿ ಸ್ವರೂಪವಾಗಿದ್ದು, ಈ ಹಾವಿನಿಂದ ನಿಧಿ ಇರುವ ಜಾಗ ಕಂಡುಹಿಡಿಯುಬಹುದು. ಅಲ್ಲದೇ ವ್ಯವಹಾರದ ಸ್ಥಳದಲ್ಲಿ ಇದನ್ನು ಇಟ್ಟುಕೊಂಡರೆ ಆರ್ಥಿಕ ಸಂಪತ್ತು ಹೆಚ್ಚುತ್ತದೆ ನಂಬಿಸಿ ಮಾರಾಟ ಮಾಡಲಾಗುತ್ತಿದ್ದು, ಈ ಕಾರಣಕ್ಕೆ ಮಣ್ಣುಮುಕ್ಕ ಹಾವಿಗೆ ಬೇಡಿಕೆ ಹೆಚ್ಚಿದೆ’ ಎನ್ನುತ್ತಾರೆ ಅಧಿಕಾರಿಗಳು.