<p>ಸಂತೇಬೆನ್ನೂರು: ಎರಡು ದಶಕಗಳ ಹಿಂದೆಯೇ ಶಿಥಿಲಾವಸ್ಥೆ ತಲುಪಿರುವ ಜಲಸಂಪನ್ಮೂಲ ಇಲಾಖೆಯ ಪ್ರವಾಸಿ ಮಂದಿರದ ನೆಲಸಮಕ್ಕೆ ನಿರ್ಲಕ್ಷ್ಯ ವಹಿಸಿದ ಪರಿಣಾಮ ಇಡೀ ಕಟ್ಟಡ ಪಾಳು ಬಿದ್ದು, ಭೂತ ಬಂಗಲೆಯಂತಾಗಿದೆ.</p>.<p>ಕುಮಟಾ– ಕಡಮಡಗಿ ರಾಜ್ಯ ಹೆದ್ದಾರಿ ಬದಿಯಲ್ಲಿ ಇರುವ ಅಂದಾಜು ನಾಲ್ಕು ಎಕರೆ ಪ್ರದೇಶದಲ್ಲಿನ ಈ ಕಟ್ಟಡದ ಸುತ್ತ ಮರ-ಗಿಡಗಳು, ಪೊದೆ ಬೆಳೆದುಕೊಂಡಿದ್ದು, ಪ್ರವಾಸಿ ಮಂದಿರ ಹೊರತಾಗಿ ನಿವೇಶನದಲ್ಲಿ ಇಲಾಖೆ ನೌಕರರಿಗೆ ನಿರ್ಮಿಸಿದ್ದ ವಸತಿ ಗೃಹಗಳೂ ಪಾಳು ಬಿದ್ದಿವೆ. ಸಾರ್ವಜನಿಕರು ಈ ಬಗ್ಗೆ ಹಲವು ಬಾರಿ ಇಲಾಖೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.</p>.<p>‘ಪಾಳು ಬಿದ್ದ ಕಟ್ಟಡಗಳ ಸುತ್ತ ಇರುವ ಪೊದೆಗಳು ವಿಷಜಂತುಗಳ ಆವಾಸ ಸ್ಥಾನವಾಗಿವೆ. ರಾತ್ರಿ ಮುಖ್ಯ ರಸ್ತೆಯತ್ತ ಹಾವುಗಳು ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ಭಯ ಉಂಟುಮಾಡಿವೆ. ನಿವೇಶನದ ಸುತ್ತ ಇರುವ ಕೆಲವು ಮನೆಗಳ ನಿವಾಸಿಗಳು ಪೊದೆಗಳಿಂದಾಗಿ ಭಯಭೀತರಾಗಿದ್ದಾರೆ’ ಎನ್ನುತ್ತಾರೆ ಅಲ್ಲಿನ ನಿವಾಸಿ ನಾಗರಾಜ್.</p>.<p>ಬೇಸಿಗೆ ಆರಂಭದಲ್ಲಿ ಪ್ರವಾಸಿ ಮಂದಿರದ ಆವರಣದಲ್ಲಿನ ಪೊದೆಗಳಿಗೆ ಆಕಸ್ಮಿಕ ಬೆಂಕಿ ತಗುಲಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣಕ್ಕೆ ಧಾವಿಸಿ ಬೆಂಕಿ ನಂದಿಸಿದರು. ಇಲ್ಲದಿದ್ದರೆ ಸುತ್ತಮುತ್ತಲ ಮನೆಗಳವರಿಗೂ ಸಮಸ್ಯೆ ಆಗುತ್ತಿತ್ತು ಎಂದು ಸ್ಥಳೀಯರು ಹೇಳಿದರು.</p>.<p>70ರ ದಶಕದಲ್ಲಿ ಭದ್ರಾ ನಾಲೆ ನಿರ್ಮಾಣದ ನಂತರ ಪ್ರವಾಸಿ ಮಂದಿರ ನಿರ್ಮಿಸಲಾಗಿತ್ತು. ಸುಸಜ್ಜಿತ ಕೊಠಡಿಗಳು ಹಾಗೂ ಸ್ವಚ್ಛ ಪರಿಸರದಿಂದ ಅದು ಮನ ಸೆಳೆಯುತ್ತಿತ್ತು. ರಾಜಕಾರಣಿಗಳು, ಅಧಿಕಾರಿಗಳು ಈ ಭಾಗದ ಭೇಟಿ ಸಂದರ್ಭ ತಂಗಲು, ಸಭೆ ನಡೆಸಲು, ಭೋಜನ ವ್ಯವಸ್ಥೆ ಕಲ್ಪಿಸಲು ಅನುಕೂಲಕರವಾಗಿತ್ತು. ಕಟ್ಟಡ ಹಳೆಯದಾದಂತೆ ನಿರ್ವಹಣೆಯಿಲ್ಲದೆ ಪಾಳು ಬಿದ್ದು ನಂತರ ಗ್ರಾಮಕ್ಕೆ ಭೇಟಿ ನೀಡುವ ಅಧಿಕಾರಿಗಳಿಗೆ ಸೂಕ್ತ ವ್ಯವಸ್ಥೆ ಇಲ್ಲದಂತಾಗಿದೆ.</p>.<p>‘ಈ ಊರು ದೊಡ್ಡದಾಗಿದ್ದು, ಸುಸಜ್ಜಿತ ಪ್ರವಾಸಿ ಮಂದಿರ ನಿರ್ಮಿಸಲು ಜನಪ್ರತಿನಿಧಿಗಳು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಸಿದ್ದಪ್ಪ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260513-43-1432465151</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಂತೇಬೆನ್ನೂರು: ಎರಡು ದಶಕಗಳ ಹಿಂದೆಯೇ ಶಿಥಿಲಾವಸ್ಥೆ ತಲುಪಿರುವ ಜಲಸಂಪನ್ಮೂಲ ಇಲಾಖೆಯ ಪ್ರವಾಸಿ ಮಂದಿರದ ನೆಲಸಮಕ್ಕೆ ನಿರ್ಲಕ್ಷ್ಯ ವಹಿಸಿದ ಪರಿಣಾಮ ಇಡೀ ಕಟ್ಟಡ ಪಾಳು ಬಿದ್ದು, ಭೂತ ಬಂಗಲೆಯಂತಾಗಿದೆ.</p>.<p>ಕುಮಟಾ– ಕಡಮಡಗಿ ರಾಜ್ಯ ಹೆದ್ದಾರಿ ಬದಿಯಲ್ಲಿ ಇರುವ ಅಂದಾಜು ನಾಲ್ಕು ಎಕರೆ ಪ್ರದೇಶದಲ್ಲಿನ ಈ ಕಟ್ಟಡದ ಸುತ್ತ ಮರ-ಗಿಡಗಳು, ಪೊದೆ ಬೆಳೆದುಕೊಂಡಿದ್ದು, ಪ್ರವಾಸಿ ಮಂದಿರ ಹೊರತಾಗಿ ನಿವೇಶನದಲ್ಲಿ ಇಲಾಖೆ ನೌಕರರಿಗೆ ನಿರ್ಮಿಸಿದ್ದ ವಸತಿ ಗೃಹಗಳೂ ಪಾಳು ಬಿದ್ದಿವೆ. ಸಾರ್ವಜನಿಕರು ಈ ಬಗ್ಗೆ ಹಲವು ಬಾರಿ ಇಲಾಖೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.</p>.<p>‘ಪಾಳು ಬಿದ್ದ ಕಟ್ಟಡಗಳ ಸುತ್ತ ಇರುವ ಪೊದೆಗಳು ವಿಷಜಂತುಗಳ ಆವಾಸ ಸ್ಥಾನವಾಗಿವೆ. ರಾತ್ರಿ ಮುಖ್ಯ ರಸ್ತೆಯತ್ತ ಹಾವುಗಳು ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ಭಯ ಉಂಟುಮಾಡಿವೆ. ನಿವೇಶನದ ಸುತ್ತ ಇರುವ ಕೆಲವು ಮನೆಗಳ ನಿವಾಸಿಗಳು ಪೊದೆಗಳಿಂದಾಗಿ ಭಯಭೀತರಾಗಿದ್ದಾರೆ’ ಎನ್ನುತ್ತಾರೆ ಅಲ್ಲಿನ ನಿವಾಸಿ ನಾಗರಾಜ್.</p>.<p>ಬೇಸಿಗೆ ಆರಂಭದಲ್ಲಿ ಪ್ರವಾಸಿ ಮಂದಿರದ ಆವರಣದಲ್ಲಿನ ಪೊದೆಗಳಿಗೆ ಆಕಸ್ಮಿಕ ಬೆಂಕಿ ತಗುಲಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣಕ್ಕೆ ಧಾವಿಸಿ ಬೆಂಕಿ ನಂದಿಸಿದರು. ಇಲ್ಲದಿದ್ದರೆ ಸುತ್ತಮುತ್ತಲ ಮನೆಗಳವರಿಗೂ ಸಮಸ್ಯೆ ಆಗುತ್ತಿತ್ತು ಎಂದು ಸ್ಥಳೀಯರು ಹೇಳಿದರು.</p>.<p>70ರ ದಶಕದಲ್ಲಿ ಭದ್ರಾ ನಾಲೆ ನಿರ್ಮಾಣದ ನಂತರ ಪ್ರವಾಸಿ ಮಂದಿರ ನಿರ್ಮಿಸಲಾಗಿತ್ತು. ಸುಸಜ್ಜಿತ ಕೊಠಡಿಗಳು ಹಾಗೂ ಸ್ವಚ್ಛ ಪರಿಸರದಿಂದ ಅದು ಮನ ಸೆಳೆಯುತ್ತಿತ್ತು. ರಾಜಕಾರಣಿಗಳು, ಅಧಿಕಾರಿಗಳು ಈ ಭಾಗದ ಭೇಟಿ ಸಂದರ್ಭ ತಂಗಲು, ಸಭೆ ನಡೆಸಲು, ಭೋಜನ ವ್ಯವಸ್ಥೆ ಕಲ್ಪಿಸಲು ಅನುಕೂಲಕರವಾಗಿತ್ತು. ಕಟ್ಟಡ ಹಳೆಯದಾದಂತೆ ನಿರ್ವಹಣೆಯಿಲ್ಲದೆ ಪಾಳು ಬಿದ್ದು ನಂತರ ಗ್ರಾಮಕ್ಕೆ ಭೇಟಿ ನೀಡುವ ಅಧಿಕಾರಿಗಳಿಗೆ ಸೂಕ್ತ ವ್ಯವಸ್ಥೆ ಇಲ್ಲದಂತಾಗಿದೆ.</p>.<p>‘ಈ ಊರು ದೊಡ್ಡದಾಗಿದ್ದು, ಸುಸಜ್ಜಿತ ಪ್ರವಾಸಿ ಮಂದಿರ ನಿರ್ಮಿಸಲು ಜನಪ್ರತಿನಿಧಿಗಳು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಸಿದ್ದಪ್ಪ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260513-43-1432465151</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>