ಎಸ್.ಎಸ್.ಪಿ ಸತ್ಯಾಗ್ರಹಿಗಳ ಮೇಲೆ ಲಾಠಿ ಚಾರ್ಜ್
ಸಾಗರ, ಮೇ 13– ಎಸ್.ಎಸ್.ಪಿ. ಚಳವಳಿ ಅಂಗವಾಗಿ ಇಂದು ಸ್ಥಳೀಯ ಅಸಿಸ್ಟೆಂಟ್ ಕಮೀಷನರ್ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿದ್ದ ಸತ್ಯಾಗ್ರಹಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ಪರಿಣಾಮವಾಗಿ ಎಸ್.ಎಸ್.ಪಿ. ನಾಯಕ ಕಾಗೋಡು ತಿಮ್ಮಪ್ಪ ಅವರೂ ಸೇರಿ ಆರುಮಂದಿ ಸತ್ಯಾಗ್ರಹಿಗಳು ಗಾಯಗೊಂಡರು. ಇತರ ಅನೇಕರಿಗೆ ಅಲ್ಪ ಪ್ರಮಾಣದ ಗಾಯಗಳಾದುವು.