ಪದ್ಮದೀಪ ಇಂಟರ್ ನ್ಯಾಷನಲ್ ಶಾಲೆಯ ಯುಕೆಜಿ ವಿದ್ಯಾರ್ಥಿ ಅಜೇಯ (5) ಮೃತಪಟ್ಟ ಬಾಲಕ. ಶಾಲೆಯ ಬಸ್ನಲ್ಲಿ ಸಂಜೆ ವಾಪಸ್ ಸ್ವಗ್ರಾಮ ಕೆ.ಗಾಣದಕಟ್ಟೆಗೆ ಹೋಗುವಾಗ ಈ ಘಟನೆ ನಡೆದಿದೆ. ಬಾಲಕ ಇಳಿದು ಹೋಗುವ ವೇಳೆ ಬಸ್ನ ಚಕ್ರದಡಿಗೆ ಸಿಲುಕಿ ಮೃತಪಟ್ಟಿದ್ದಾನೆ.ಸುದ್ದಿ ತಿಳಿದ ಗ್ರಾಮಸ್ಥರು ಶಾಲೆಯ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ. ಪೊಲೀಸರು ಚಾಲಕನನ್ನು ಬಂಧಿಸಿದ್ದಾರೆ.