ದಾವಣಗೆರೆ ತಾಲ್ಲೂಕಿನ ಗ್ರಾಮವೊಂದರ ನಿವಾಸಿ ಶಿವು ಅಲಿಯಾಸ್ ಶಿವಕುಮಾರ ಶಿಕ್ಷೆಗೊಳಗಾದ ಅಪರಾಧಿ. 2018ರಲ್ಲಿ ಈತ ಬಾಲಕಿಗೆ ತಿಂಡಿ ಕೊಡಿಸಿ ಪುಸಲಾಯಿಸಿ ತನ್ನ ಮನೆಯ ದನದ ಕೊಟ್ಟಿಗೆಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಬಾಲಕಿ ಅಳಲು ಆರಂಭಿಸಿದಾಗ ಆರೋಪಿ ಸಮಾಧಾನಪಡಿಸಿ ತನ್ನ ಮನೆಯ ಕ್ರಾಸ್ನ ಪಕ್ಕದಲ್ಲಿ ಬಿಟ್ಟು ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದಾನೆ.