ಪೊಲೀಸರಿಗೆ ಮನವಿ: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗವು ಸೋಮವಾರ ಹೆತ್ತವರ ಜತೆಗೆ ಕಾಲೇಜಿಗೆ ಬಂದು ಈ ಬಗ್ಗೆ ವಿಚಾರಿಸಿದ್ದಾರೆ. ಬಳಿಕ ಬಡಾವಣೆ ಪೊಲೀಸರಿಗೆ ಮನವಿ ನೀಡಿದ್ದು, ಈ ಉಪನ್ಯಾಸಕ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ. ವೇದಿಕೆಯ ಅಧ್ಯಕ್ಷೆ ಸುವರ್ಣಮ್ಮ, ಪುಷ್ಪಾವತಿ, ನೀಲಮ್ಮ, ಎಂ. ರಾಜಕುಮಾರ್ ಅವರೂ ಇದ್ದರು.