<p><strong>ದಾವಣಗೆರೆ:</strong> ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕಲ್ಪಿಸುವಂತೆ 35 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಸೌಲಭ್ಯ ಅನುಭವಿಸುವ ಕಾಲ ಸಮೀಪಿಸಿದಾಗ ರಾಜ್ಯ ಸರ್ಕಾರ ಕೈಗೊಂಡ ತೀರ್ಮಾನ ಬೇಸರ ಮೂಡಿಸಿದೆ. ಮಾದಿಗ ಸಮುದಾಯದ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ಆದಿಜಾಂಬವ ಗುರುಪೀಠದ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಎಚ್ಚರಿಕೆ ನೀಡಿದರು.</p><p>ನಗರದಲ್ಲಿ ಗುರುವಾರ ಪಾದಯಾತ್ರೆ ಆರಂಭಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ‘ಮಾದಿಗ ಸಮುದಾಯಕ್ಕೆ ತಾಳ್ಮೆ ಹೆಚ್ಚು. ಒಳಮೀಸಲಾತಿಯನ್ನು ಇನ್ನೂ ಬೇಡುತ್ತಿದ್ದೇವೆ. ಇದಕ್ಕೆ ಸ್ಪಂದಿಸದೇ ಹೋದರೆ ಬೇಡುವುದನ್ನು ಬಿಟ್ಟು ಕಿತ್ತುಕೊಳ್ಳುವ ದಾರಿಗೆ ಇಳಿಬೇಕಾಗುತ್ತದೆ’ ಎಂದು ಕಿಡಿಕಾರಿದರು.</p><p>‘ಮಾದಿಗ ಸಮುದಾಯ ಪರಿಶಿಷ್ಟ ಜಾತಿಯಲ್ಲಿಯೇ ತೀರಾ ಕನಿಷ್ಠ ಮಟ್ಟದಲ್ಲಿ ಬದುಕುತ್ತಿದೆ. ಸರ್ಕಾರದ ತಾರತಮ್ಯ, ನಿರ್ಲಕ್ಷ್ಯ ಧೋರಣೆಯಿಂದ ಶೈಕ್ಷಣಿಕ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಅನ್ಯಾಯವಾಗಿದೆ. ಒಳಮೀಸಲಾತಿ ಮೂಲಕ ಜೀವನ ಸುಧಾರಣೆ ಕಾಣುವ ಹಂಬಲಕ್ಕೆ ಸರ್ಕಾರ ತಣ್ಣೀರು ಎರಚಿದೆ’ ಎಂದು ಬೇಸರ ವ್ಯಕ್ತಪಡಿಸಿದರು.</p><p>‘ಒಳಮೀಸಲಾತಿಗೆ ಸಂಬಂಧಿಸಿದಂತೆ ಹಲವು ಆಯೋಗಗಳು ಪ್ರಾಮಾಣಿಕ ವರದಿ ನೀಡಿವೆ. ಅನುಷ್ಠಾನಕ್ಕೆ ಇಚ್ಛಾಶಕ್ತಿ ಪ್ರದರ್ಶಿಸದ ಸರ್ಕಾರ ಕಾಲಾಹರಣ ಮಾಡುತ್ತಿದೆ. ಈ ಮೂಲಕ ಸಂವಿಧಾನದ ಆಶಯಗಳನ್ನು ಹಾಳು ಮಾಡುತ್ತಿದೆ. ಹುದ್ದೆ ಭರ್ತಿಗೆ ಮುಂದಾಗಿರುವ ರಾಜ್ಯ ಸರ್ಕಾರದ ತೀರ್ಮಾನ ಸ್ವಾಗತಾರ್ಹ. ಆದರೆ, ಒಳಮೀಸಲು ಸೌಲಭ್ಯ ಕಲ್ಪಿಸದೇ ಪ್ರಕ್ರಿಯೆ ಕೈಗೆತ್ತಿಕೊಳ್ಳುವುದು ಸರಿಯಲ್ಲ’ ಎಂದರು.</p><p>‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮಾದಿಗ ಸಮುದಾಯ ಸಾಕಷ್ಟು ಭರವಸೆ ಇಟ್ಟುಕೊಂಡಿದೆ. ಆದರೆ, ಅವರ ಇತ್ತೀಚಿನ ನಿರ್ಧಾರಗಳು ಈ ನಂಬಿಕೆಯನ್ನು ಹುಸಿಗೊಳಿಸಿವೆ. ಮಾರ್ಚ್ 27ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಜಾರಿಗೆ ತೀರ್ಮಾನ ಕೈಗೊಳ್ಳಬೇಕು. ಒಳಮೀಸಲು ಗ್ಯಾರಂಟಿಯನ್ನು ಮಾದಿಗ ಸಮುದಾಯಕ್ಕೆ ನೀಡಬೇಕು’ ಎಂದು ಒತ್ತಾಯಿಸಿದರು.</p>.<div><blockquote>ಒಳಮೀಸಲಾತಿ ಕಲ್ಪಿಸದೇ ನೇಮಕಾತಿ ಪ್ರಕ್ರಿಯೆ ನಡೆಸಿದರೆ ಮಾದಿಗ ಸಮುದಾಯಕ್ಕೆ ಅನ್ಯಾಯವಾಗಲಿದೆ. ಸಮುದಾಯದ ನೋವಿಗೆ ಸರ್ಕಾರ ಸ್ಪಂದಿಸಬೇಕು</blockquote><span class="attribution">ಎಚ್.ವಿಶ್ವನಾಥ್, ಅಧ್ಯಕ್ಷರು, ಕನ್ನಡ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ</span></div>.<h2><strong>ಆನುಗೋಡಿನತ್ತ ಪಾದಯಾತ್ರೆ</strong></h2><p>ಷಡಕ್ಷರಮುನಿ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ಗುರುವಾರ ದಾವಣಗೆರೆ ತಾಲ್ಲೂಕಿನ ಆನಗೋಡು ಕಡೆಗೆ ಸಾಗಿತು. ಗ್ರಾಮದ ಅಂಬೇಡ್ಕರ್ ಭವನದಲ್ಲಿ ವಾಸ್ತವ್ಯ ಹೂಡಲಿರುವ ಸ್ವಾಮೀಜಿ, ಶುಕ್ರವಾರ ಬೆಳಿಗ್ಗೆ ಪಾದಯಾತ್ರೆ ಮುಂದುವರಿಸಲಿದ್ದಾರೆ.</p><p>ಹರಿಹರದಿಂದ ಬಂದು ದಾವಣಗೆರೆಯಲ್ಲಿ ತಂಗಿದ್ದ ಷಡಕ್ಷರಮುನಿ ಸ್ವಾಮೀಜಿ, ಗುರುವಾರ ಬೆಳಿಗ್ಗೆ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಾದಯಾತ್ರೆ ಆರಂಭಿಸಿದರು. ಆವರಗೆರೆ, ಬಾಡ ಕ್ರಾಸ್ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ತಲುಪಿದರು. ಎಚ್.ಕಲ್ಪನಹಳ್ಳಿಯಲ್ಲಿ ಸಮುದಾಯದ ಸಭೆ ನಡೆಸಿ ಕಾಲ್ನಡಿಗೆ ಮುಂದುವರಿಸಿದರು.</p><p>ಸಮುದಾಯದ ಮುಖಂಡರಾದ ಹೆಗ್ಗೆರೆ ರಂಗಪ್ಪ, ಎಚ್.ನಿಜಗುಣ, ಬಿ.ಎಂ. ನಿರಂಜನ್, ಸುರೇಶ್ ಕುಣೆಬೆಳಕೆರೆ, ಬೇತೂರು ಮಂಜುನಾಥ್, ಮೈಲಾರಪ್ಪ, ಐರಣಿ ಚಂದ್ರು, ಎಂ.ಚಂದ್ರಪ್ಪ, ಸುಜಾತಾ ಇದ್ದರು.</p>.<h2><ins>‘ರಾಜೀನಾಮೆ ನೀಡಬೇಡಿ’</ins></h2><p>‘ಮಾದಿಗ ಸಮುದಾಯದ ಸಚಿವರು ಸರ್ಕಾರದ ನಡೆಯಗೆ ಆಕ್ಷೇಪ ವ್ಯಕ್ತಪಡಿಸಿ ರಾಜೀನಾಮೆ ನೀಡುವುದು ಬೇಡ. ಸಮುದಾಯದ ನಾಯಕರು ಸಚಿವ ಸಂಪುಟದಲ್ಲಿ ಇದ್ದರೆ ಅನುಕೂಲ’ ಎಂದು ಷಡಕ್ಷರಮುನಿ ಸ್ವಾಮೀಜಿ ತಿಳಿಸಿದರು.</p><p>‘ರಾಜ್ಯ ಸಚಿವ ಸಂಪುಟದಲ್ಲಿ ಸಮುದಾಯದ ಕೆಲವರಿಗೆ ಮಾತ್ರ ಅವಕಾಶ ಸಿಕ್ಕಿದೆ. ಒಳಮೀಸಲಾತಿ ಕಲ್ಪಿಸದೇ ನೇಮಕಾತಿ ನಡೆಸಲು ಮುಂದಾದ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಇದೆ. ಸದನದಲ್ಲಿ ಸಮುದಾಯದ ಧ್ವನಿಯಾಗುವ ಅವಕಾಶವನ್ನು ಸಚಿವರು ತಪ್ಪಿಸಿಕೊಳ್ಳಬಾರದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕಲ್ಪಿಸುವಂತೆ 35 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಸೌಲಭ್ಯ ಅನುಭವಿಸುವ ಕಾಲ ಸಮೀಪಿಸಿದಾಗ ರಾಜ್ಯ ಸರ್ಕಾರ ಕೈಗೊಂಡ ತೀರ್ಮಾನ ಬೇಸರ ಮೂಡಿಸಿದೆ. ಮಾದಿಗ ಸಮುದಾಯದ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ಆದಿಜಾಂಬವ ಗುರುಪೀಠದ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಎಚ್ಚರಿಕೆ ನೀಡಿದರು.</p><p>ನಗರದಲ್ಲಿ ಗುರುವಾರ ಪಾದಯಾತ್ರೆ ಆರಂಭಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ‘ಮಾದಿಗ ಸಮುದಾಯಕ್ಕೆ ತಾಳ್ಮೆ ಹೆಚ್ಚು. ಒಳಮೀಸಲಾತಿಯನ್ನು ಇನ್ನೂ ಬೇಡುತ್ತಿದ್ದೇವೆ. ಇದಕ್ಕೆ ಸ್ಪಂದಿಸದೇ ಹೋದರೆ ಬೇಡುವುದನ್ನು ಬಿಟ್ಟು ಕಿತ್ತುಕೊಳ್ಳುವ ದಾರಿಗೆ ಇಳಿಬೇಕಾಗುತ್ತದೆ’ ಎಂದು ಕಿಡಿಕಾರಿದರು.</p><p>‘ಮಾದಿಗ ಸಮುದಾಯ ಪರಿಶಿಷ್ಟ ಜಾತಿಯಲ್ಲಿಯೇ ತೀರಾ ಕನಿಷ್ಠ ಮಟ್ಟದಲ್ಲಿ ಬದುಕುತ್ತಿದೆ. ಸರ್ಕಾರದ ತಾರತಮ್ಯ, ನಿರ್ಲಕ್ಷ್ಯ ಧೋರಣೆಯಿಂದ ಶೈಕ್ಷಣಿಕ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಅನ್ಯಾಯವಾಗಿದೆ. ಒಳಮೀಸಲಾತಿ ಮೂಲಕ ಜೀವನ ಸುಧಾರಣೆ ಕಾಣುವ ಹಂಬಲಕ್ಕೆ ಸರ್ಕಾರ ತಣ್ಣೀರು ಎರಚಿದೆ’ ಎಂದು ಬೇಸರ ವ್ಯಕ್ತಪಡಿಸಿದರು.</p><p>‘ಒಳಮೀಸಲಾತಿಗೆ ಸಂಬಂಧಿಸಿದಂತೆ ಹಲವು ಆಯೋಗಗಳು ಪ್ರಾಮಾಣಿಕ ವರದಿ ನೀಡಿವೆ. ಅನುಷ್ಠಾನಕ್ಕೆ ಇಚ್ಛಾಶಕ್ತಿ ಪ್ರದರ್ಶಿಸದ ಸರ್ಕಾರ ಕಾಲಾಹರಣ ಮಾಡುತ್ತಿದೆ. ಈ ಮೂಲಕ ಸಂವಿಧಾನದ ಆಶಯಗಳನ್ನು ಹಾಳು ಮಾಡುತ್ತಿದೆ. ಹುದ್ದೆ ಭರ್ತಿಗೆ ಮುಂದಾಗಿರುವ ರಾಜ್ಯ ಸರ್ಕಾರದ ತೀರ್ಮಾನ ಸ್ವಾಗತಾರ್ಹ. ಆದರೆ, ಒಳಮೀಸಲು ಸೌಲಭ್ಯ ಕಲ್ಪಿಸದೇ ಪ್ರಕ್ರಿಯೆ ಕೈಗೆತ್ತಿಕೊಳ್ಳುವುದು ಸರಿಯಲ್ಲ’ ಎಂದರು.</p><p>‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮಾದಿಗ ಸಮುದಾಯ ಸಾಕಷ್ಟು ಭರವಸೆ ಇಟ್ಟುಕೊಂಡಿದೆ. ಆದರೆ, ಅವರ ಇತ್ತೀಚಿನ ನಿರ್ಧಾರಗಳು ಈ ನಂಬಿಕೆಯನ್ನು ಹುಸಿಗೊಳಿಸಿವೆ. ಮಾರ್ಚ್ 27ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಜಾರಿಗೆ ತೀರ್ಮಾನ ಕೈಗೊಳ್ಳಬೇಕು. ಒಳಮೀಸಲು ಗ್ಯಾರಂಟಿಯನ್ನು ಮಾದಿಗ ಸಮುದಾಯಕ್ಕೆ ನೀಡಬೇಕು’ ಎಂದು ಒತ್ತಾಯಿಸಿದರು.</p>.<div><blockquote>ಒಳಮೀಸಲಾತಿ ಕಲ್ಪಿಸದೇ ನೇಮಕಾತಿ ಪ್ರಕ್ರಿಯೆ ನಡೆಸಿದರೆ ಮಾದಿಗ ಸಮುದಾಯಕ್ಕೆ ಅನ್ಯಾಯವಾಗಲಿದೆ. ಸಮುದಾಯದ ನೋವಿಗೆ ಸರ್ಕಾರ ಸ್ಪಂದಿಸಬೇಕು</blockquote><span class="attribution">ಎಚ್.ವಿಶ್ವನಾಥ್, ಅಧ್ಯಕ್ಷರು, ಕನ್ನಡ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ</span></div>.<h2><strong>ಆನುಗೋಡಿನತ್ತ ಪಾದಯಾತ್ರೆ</strong></h2><p>ಷಡಕ್ಷರಮುನಿ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ಗುರುವಾರ ದಾವಣಗೆರೆ ತಾಲ್ಲೂಕಿನ ಆನಗೋಡು ಕಡೆಗೆ ಸಾಗಿತು. ಗ್ರಾಮದ ಅಂಬೇಡ್ಕರ್ ಭವನದಲ್ಲಿ ವಾಸ್ತವ್ಯ ಹೂಡಲಿರುವ ಸ್ವಾಮೀಜಿ, ಶುಕ್ರವಾರ ಬೆಳಿಗ್ಗೆ ಪಾದಯಾತ್ರೆ ಮುಂದುವರಿಸಲಿದ್ದಾರೆ.</p><p>ಹರಿಹರದಿಂದ ಬಂದು ದಾವಣಗೆರೆಯಲ್ಲಿ ತಂಗಿದ್ದ ಷಡಕ್ಷರಮುನಿ ಸ್ವಾಮೀಜಿ, ಗುರುವಾರ ಬೆಳಿಗ್ಗೆ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಾದಯಾತ್ರೆ ಆರಂಭಿಸಿದರು. ಆವರಗೆರೆ, ಬಾಡ ಕ್ರಾಸ್ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ತಲುಪಿದರು. ಎಚ್.ಕಲ್ಪನಹಳ್ಳಿಯಲ್ಲಿ ಸಮುದಾಯದ ಸಭೆ ನಡೆಸಿ ಕಾಲ್ನಡಿಗೆ ಮುಂದುವರಿಸಿದರು.</p><p>ಸಮುದಾಯದ ಮುಖಂಡರಾದ ಹೆಗ್ಗೆರೆ ರಂಗಪ್ಪ, ಎಚ್.ನಿಜಗುಣ, ಬಿ.ಎಂ. ನಿರಂಜನ್, ಸುರೇಶ್ ಕುಣೆಬೆಳಕೆರೆ, ಬೇತೂರು ಮಂಜುನಾಥ್, ಮೈಲಾರಪ್ಪ, ಐರಣಿ ಚಂದ್ರು, ಎಂ.ಚಂದ್ರಪ್ಪ, ಸುಜಾತಾ ಇದ್ದರು.</p>.<h2><ins>‘ರಾಜೀನಾಮೆ ನೀಡಬೇಡಿ’</ins></h2><p>‘ಮಾದಿಗ ಸಮುದಾಯದ ಸಚಿವರು ಸರ್ಕಾರದ ನಡೆಯಗೆ ಆಕ್ಷೇಪ ವ್ಯಕ್ತಪಡಿಸಿ ರಾಜೀನಾಮೆ ನೀಡುವುದು ಬೇಡ. ಸಮುದಾಯದ ನಾಯಕರು ಸಚಿವ ಸಂಪುಟದಲ್ಲಿ ಇದ್ದರೆ ಅನುಕೂಲ’ ಎಂದು ಷಡಕ್ಷರಮುನಿ ಸ್ವಾಮೀಜಿ ತಿಳಿಸಿದರು.</p><p>‘ರಾಜ್ಯ ಸಚಿವ ಸಂಪುಟದಲ್ಲಿ ಸಮುದಾಯದ ಕೆಲವರಿಗೆ ಮಾತ್ರ ಅವಕಾಶ ಸಿಕ್ಕಿದೆ. ಒಳಮೀಸಲಾತಿ ಕಲ್ಪಿಸದೇ ನೇಮಕಾತಿ ನಡೆಸಲು ಮುಂದಾದ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಇದೆ. ಸದನದಲ್ಲಿ ಸಮುದಾಯದ ಧ್ವನಿಯಾಗುವ ಅವಕಾಶವನ್ನು ಸಚಿವರು ತಪ್ಪಿಸಿಕೊಳ್ಳಬಾರದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>