ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಲಿಂಗಾ ರೆಡ್ಡಿ ಹೋಗಬಾರದಿತ್ತು: ಶಾಮನೂರು

Last Updated 8 ಜುಲೈ 2019, 20:15 IST
ಅಕ್ಷರ ಗಾತ್ರ

ದಾವಣಗೆರೆ: ರಾಮಲಿಂಗಾರೆಡ್ಡಿ ಆರೇಳು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದಾರೆ. ಮಗಳಿಗೂ ಸೀಟ್‌ ಕೊಡಿಸಿದ್ದಾರೆ. ಅಂಥವರು ಹೋಗುವುದು ಅನ್ಯಾಯ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ಬೇರೆಯವರು ಹೋದರೆ ಹೋಗಲಿ. ರಾಮಲಿಂಗಾ ರೆಡ್ಡಿಯಂಥವರು ಹೋಗಬಾರದಿತ್ತು ಎಂದು ಅವರು ಸೋಮವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

‘ಯಡಿಯೂರಪ್ಪ, ಕುಮಾರಸ್ವಾಮಿ, ಸಿದ್ದರಾಮಯ್ಯ ಅವರ ಸುದ್ದಿಯೆಲ್ಲ ನಮಗೆ ಯಾಕೆ? ಅವರೆಲ್ಲ ಹೊಡೆದಾಡಿಕೊಂಡಿರುತ್ತಾರೆ. ನಾವು, ನೀವೆಲ್ಲ ನೋಡಿಕೊಂಡಿರುತ್ತೇವೆ. ಎಲ್ಲ ಸರಿಯಾಗುವ ಹಾಗೆ ಕಾಣಿಸುತ್ತಿದೆ. ಮುಂದೇನಾಗುತ್ತದೆಯೋ ನೋಡೋಣ’ ಎಂದರು.

ನಿಮ್ಮನ್ನು ಯಾರೂ ಕರೆದಿಲ್ಲವೇ ಎಂಬ ಪ್ರಶ್ನೆಗೆ, ‘ ನನ್ನನ್ನು ಯಾರೂ ಕರೆದಿಲ್ಲ. ಬೆಂಗಳೂರಿಗೆ ಬಾ ಎಂದೂ ಹೇಳಿಲ್ಲ’ ಎಂದು ಚಟಾಕಿ ಹಾರಿಸಿದರು.

ಸಿದ್ದರಾಮಯ್ಯ, ಖರ್ಗೆ ಎಲ್ಲ ಮುಖ್ಯಮಂತ್ರಿ ಆಗಲ್ಲ. ಈಗಿರುವ ಸರ್ಕಾರವೇ ಮುಂದುವರಿಯಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT