ದಾವಣಗೆರೆ: ‘ಕಾಂಗ್ರೆಸ್, ಬಿಜೆಪಿ ಎಂದಲ್ಲ; ಚುನಾವಣೆ ಬಂದಾಗ ಎಲ್ಲರೂ ಹಣ ಹಂಚುತ್ತಾರೆ’ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.
ಹೆಲಿಕಾಪ್ಟರ್ ಪತನದಿಂದ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ವೇಳೆ ಅವರು ಸುದ್ದಿಗಾರರ ಜತೆಗೆ ಮಾತನಾಡಿದರು. ಹಣ ಹಂಚಿಕೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಅವರೂ ಹಂಚಿದ್ದಾರೆ. ಇವರೂ ಹಂಚಿದ್ದಾರೆ. ಚುನಾವಣೆ ಅಂದಮೇಲೆ ಹಣದ ಮೇಲೆ ಅದು ನಿಂತಿರುತ್ತದೆ’ ಎಂದು ಹೇಳಿದರು.
‘ಬಿಜೆಪಿ–ಜೆಡಿಎಸ್ ಮೈತ್ರಿ ಬಗ್ಗೆ ಗೊತ್ತಿಲ್ಲ. ನಾವು ಯಾರನ್ನೂ ಬೆಂಬಲಿಸಿ ಎಂದು ಕೇಳಿಲ್ಲ. ಚಿತ್ರದುರ್ಗ ವಿಧಾನಪರಿಷತ್ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.