<p><strong>ದಾವಣಗೆರೆ:</strong> ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಅವರನ್ನು ಎಳೆದು ಹೊರ ಹಾಕುವುದು ಯಾವ ಸಂಸ್ಕೃತಿ? ಸ್ವಾಮೀಜಿ ಮುಟ್ಟಿದರೆ ನೀವು ಭಸ್ಮವಾಗುತ್ತೀರಿ. ಸ್ವಾಮೀಜಿ ಅವರನ್ನು ಮುಟ್ಟಿ, ನೋಡೋಣ ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಎಚ್ಚರಿಕೆ ನೀಡಿದರು.</p><p>‘ಏ.27ರಂದು ನಡೆಯಲಿರುವ ಲೆಕ್ಕ ಕೊಡುವ ಸಭೆ ಅಧಿಕೃತವಲ್ಲ. ರಾಜ್ಯದ ವಿವಿಧೆಡೆಯಿಂದ ಜನರನ್ನು ಕರೆಸಿ ರಾಜಕೀಯ ಸಮಾವೇಶ ಮಾಡುವ ಪ್ರಯತ್ನ ನಡೆಯುತ್ತಿದೆ. ಕಣಗಿ (ಬಡಗಿ) ಮುಂದೆ ಬೌನ್ಸರ್ಗಳ ಆಟ ನಡೆಯುವುದಿಲ್ಲ. ಸ್ವಾಮೀಜಿ ಮೇಲೆ ಹಲ್ಲೆ ನಡೆದರೆ ಗುರುಪೀಠದ ಟ್ರಸ್ಟಿನ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಅವರೇ ಹೊಣೆ. ಈ ಕುರಿತು ಪೊಲೀಸ್ ಇಲಾಖೆಗೂ ಪತ್ರ ನೀಡಿದ್ದೇವೆ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p><p>‘2008ರ ಫೆ.18ರಂದು ಪೀಠ ಸ್ಥಾಪನೆಯಾಗಿದೆ. ಸಮಾಜ ಕಟ್ಟುವ ಬದಲು ಕಟ್ಟಡ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಟ್ರಸ್ಟ್ ಸ್ಥಾನ ಉಳಿಸಿಕೊಳ್ಳುವುದು ಅನೇಕರಿಗೆ ದೊಡ್ಡದಾಗಿದೆ. ಸಮುದಾಯಕ್ಕೆ ಮೀಸಲಾತಿ ಕೊಡಿಸುವ ಕಳಕಳಿಯನ್ನು ಅವರಲ್ಲಿ ಕಂಡಿಲ್ಲ. ವರ್ಷಕ್ಕೊಮ್ಮೆ ಹರ ಜಾತ್ರೆ ನಡೆಸಿ ರಾಜಕಾರಿಣಿಗಳನ್ನು ಕರೆಸಿ ಅನುದಾನ ಪಡೆಯುವುದಕ್ಕೆ ಟ್ರಸ್ಟ್ ಸೀಮಿತವಾಗಿದೆ. ಬೋಗಸ್ ಲೆಕ್ಕಪತ್ರ ಸಿದ್ಧಪಡಿಸಿ ಸರ್ಕಾರದ ಹಣ ಕೂಡ ದುರ್ಬಳಕೆ ಮಾಡಿಕೊಳ್ಳಲಾಗಿದೆ’ ಎಂದು ದೂರಿದರು.</p>.ಹರಿಹರದ ಪಂಚಮಸಾಲಿ ಮಠ | ತಾರಕಕ್ಕೇರಿದ ವಿವಾದ: ಗುರುಪೀಠ ಟ್ರಸ್ಟಿಗಳ ಉಚ್ಚಾಟನೆ.ಗುರುಪೀಠದ ಟ್ರಸ್ಟ್ ಪದಾಧಿಕಾರಿಗಳ ಉಚ್ಚಾಟನೆ ಸಂಘದ ತೀರ್ಮಾನವಲ್ಲ: ಉಪಾಧ್ಯಕ್ಷ.<p>‘ಪಂಚಮಸಾಲಿ ಸಮುದಾಯ ರಾಜ್ಯದ ಎಲ್ಲೆಡೆ ಇದೆ. ವೀರಶೈವ ಲಿಂಗಾಯತರಲ್ಲಿ ಹೆಚ್ಚು ಜನಸಂಖ್ಯೆ ಹೊಂದಿದೆ. ಆದರೆ, ಗುರುಪೀಠದ ಟ್ರಸ್ಟ್ನಲ್ಲಿ ದಾವಣಗೆರೆ, ಹಾವೇರಿ ಹಾಗೂ ಚಿತ್ರದುರ್ಗ ಜಿಲ್ಲೆಯ 7 ಆಜೀವ ಸದಸ್ಯರು ಮಾತ್ರ ಇದ್ದಾರೆ. ಶಾಸಕರು, ಸಚಿವರು ಸೇರಿದಂತೆ ಯಾರೊಬ್ಬರಿಗೂ ಟ್ರಸ್ಟ್ ಸದಸ್ಯತ್ವ ನೀಡುತ್ತಿಲ್ಲ. ಲೆಕ್ಕ ಕೇಳಿದವರನ್ನು ತೆಗಳಿ ಹೊರಹಾಕುವ ಪರಂಪರೆ ಟ್ರಸ್ಟ್ ಬೆಳೆಸಿಕೊಂಡಿದೆ’ ಎಂದು ಆರೋಪಿಸಿದರು.</p><p>ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಅಧ್ಯಕ್ಷ ಸೋಮನಗೌಡ ಎಂ. ಪಾಟೀಲ, ಮಾಜಿ ಶಾಸಕರಾದ ಅರುಣ್ಕುಮಾರ್ ಪೂಜಾರ್, ನಂದಿಹಳ್ಳಿ ಹಾಲಪ್ಪ, ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಮಠದ ಆಡಳಿತಾಧಿಕಾರಿ ರಾಜ್ಕುಮಾರ್ ಹೊನ್ನಾಳಿ ಹಾಜರಿದ್ದರು.</p>.<div><blockquote>ಸಮುದಾಯದ ಹಿರಿಯರಾದ ಬಿ.ಸಿ. ಉಮಾಪತಿ ನಮ್ಮ ವಿರೋಧಿಗಳಲ್ಲ. ಅವರ ಸುತ್ತ ಇರುವವರು ಸರಿ ಇಲ್ಲ. ನಗದು ರೂಪದಲ್ಲಿ ನೀಡಿದ ದೇಣಿಗೆಯಲ್ಲಿ ಅವ್ಯವಹಾರ ನಡೆದಿದೆ.</blockquote><span class="attribution">– ಎಚ್.ಎಸ್. ಶಿವಶಂಕರ್, ಮಾಜಿ ಶಾಸಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಅವರನ್ನು ಎಳೆದು ಹೊರ ಹಾಕುವುದು ಯಾವ ಸಂಸ್ಕೃತಿ? ಸ್ವಾಮೀಜಿ ಮುಟ್ಟಿದರೆ ನೀವು ಭಸ್ಮವಾಗುತ್ತೀರಿ. ಸ್ವಾಮೀಜಿ ಅವರನ್ನು ಮುಟ್ಟಿ, ನೋಡೋಣ ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಎಚ್ಚರಿಕೆ ನೀಡಿದರು.</p><p>‘ಏ.27ರಂದು ನಡೆಯಲಿರುವ ಲೆಕ್ಕ ಕೊಡುವ ಸಭೆ ಅಧಿಕೃತವಲ್ಲ. ರಾಜ್ಯದ ವಿವಿಧೆಡೆಯಿಂದ ಜನರನ್ನು ಕರೆಸಿ ರಾಜಕೀಯ ಸಮಾವೇಶ ಮಾಡುವ ಪ್ರಯತ್ನ ನಡೆಯುತ್ತಿದೆ. ಕಣಗಿ (ಬಡಗಿ) ಮುಂದೆ ಬೌನ್ಸರ್ಗಳ ಆಟ ನಡೆಯುವುದಿಲ್ಲ. ಸ್ವಾಮೀಜಿ ಮೇಲೆ ಹಲ್ಲೆ ನಡೆದರೆ ಗುರುಪೀಠದ ಟ್ರಸ್ಟಿನ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಅವರೇ ಹೊಣೆ. ಈ ಕುರಿತು ಪೊಲೀಸ್ ಇಲಾಖೆಗೂ ಪತ್ರ ನೀಡಿದ್ದೇವೆ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p><p>‘2008ರ ಫೆ.18ರಂದು ಪೀಠ ಸ್ಥಾಪನೆಯಾಗಿದೆ. ಸಮಾಜ ಕಟ್ಟುವ ಬದಲು ಕಟ್ಟಡ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಟ್ರಸ್ಟ್ ಸ್ಥಾನ ಉಳಿಸಿಕೊಳ್ಳುವುದು ಅನೇಕರಿಗೆ ದೊಡ್ಡದಾಗಿದೆ. ಸಮುದಾಯಕ್ಕೆ ಮೀಸಲಾತಿ ಕೊಡಿಸುವ ಕಳಕಳಿಯನ್ನು ಅವರಲ್ಲಿ ಕಂಡಿಲ್ಲ. ವರ್ಷಕ್ಕೊಮ್ಮೆ ಹರ ಜಾತ್ರೆ ನಡೆಸಿ ರಾಜಕಾರಿಣಿಗಳನ್ನು ಕರೆಸಿ ಅನುದಾನ ಪಡೆಯುವುದಕ್ಕೆ ಟ್ರಸ್ಟ್ ಸೀಮಿತವಾಗಿದೆ. ಬೋಗಸ್ ಲೆಕ್ಕಪತ್ರ ಸಿದ್ಧಪಡಿಸಿ ಸರ್ಕಾರದ ಹಣ ಕೂಡ ದುರ್ಬಳಕೆ ಮಾಡಿಕೊಳ್ಳಲಾಗಿದೆ’ ಎಂದು ದೂರಿದರು.</p>.ಹರಿಹರದ ಪಂಚಮಸಾಲಿ ಮಠ | ತಾರಕಕ್ಕೇರಿದ ವಿವಾದ: ಗುರುಪೀಠ ಟ್ರಸ್ಟಿಗಳ ಉಚ್ಚಾಟನೆ.ಗುರುಪೀಠದ ಟ್ರಸ್ಟ್ ಪದಾಧಿಕಾರಿಗಳ ಉಚ್ಚಾಟನೆ ಸಂಘದ ತೀರ್ಮಾನವಲ್ಲ: ಉಪಾಧ್ಯಕ್ಷ.<p>‘ಪಂಚಮಸಾಲಿ ಸಮುದಾಯ ರಾಜ್ಯದ ಎಲ್ಲೆಡೆ ಇದೆ. ವೀರಶೈವ ಲಿಂಗಾಯತರಲ್ಲಿ ಹೆಚ್ಚು ಜನಸಂಖ್ಯೆ ಹೊಂದಿದೆ. ಆದರೆ, ಗುರುಪೀಠದ ಟ್ರಸ್ಟ್ನಲ್ಲಿ ದಾವಣಗೆರೆ, ಹಾವೇರಿ ಹಾಗೂ ಚಿತ್ರದುರ್ಗ ಜಿಲ್ಲೆಯ 7 ಆಜೀವ ಸದಸ್ಯರು ಮಾತ್ರ ಇದ್ದಾರೆ. ಶಾಸಕರು, ಸಚಿವರು ಸೇರಿದಂತೆ ಯಾರೊಬ್ಬರಿಗೂ ಟ್ರಸ್ಟ್ ಸದಸ್ಯತ್ವ ನೀಡುತ್ತಿಲ್ಲ. ಲೆಕ್ಕ ಕೇಳಿದವರನ್ನು ತೆಗಳಿ ಹೊರಹಾಕುವ ಪರಂಪರೆ ಟ್ರಸ್ಟ್ ಬೆಳೆಸಿಕೊಂಡಿದೆ’ ಎಂದು ಆರೋಪಿಸಿದರು.</p><p>ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಅಧ್ಯಕ್ಷ ಸೋಮನಗೌಡ ಎಂ. ಪಾಟೀಲ, ಮಾಜಿ ಶಾಸಕರಾದ ಅರುಣ್ಕುಮಾರ್ ಪೂಜಾರ್, ನಂದಿಹಳ್ಳಿ ಹಾಲಪ್ಪ, ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಮಠದ ಆಡಳಿತಾಧಿಕಾರಿ ರಾಜ್ಕುಮಾರ್ ಹೊನ್ನಾಳಿ ಹಾಜರಿದ್ದರು.</p>.<div><blockquote>ಸಮುದಾಯದ ಹಿರಿಯರಾದ ಬಿ.ಸಿ. ಉಮಾಪತಿ ನಮ್ಮ ವಿರೋಧಿಗಳಲ್ಲ. ಅವರ ಸುತ್ತ ಇರುವವರು ಸರಿ ಇಲ್ಲ. ನಗದು ರೂಪದಲ್ಲಿ ನೀಡಿದ ದೇಣಿಗೆಯಲ್ಲಿ ಅವ್ಯವಹಾರ ನಡೆದಿದೆ.</blockquote><span class="attribution">– ಎಚ್.ಎಸ್. ಶಿವಶಂಕರ್, ಮಾಜಿ ಶಾಸಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>