‘ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಮಹಿಳಾ ಕಾರ್ಯಕರ್ತೆಯಾಗಿ ಹಲವು ವರ್ಷಗಳಿಂದ ಸೇವೆ ಮಾಡಿದ್ದೇನೆ. ಹೀಗಾಗಿ ನಾನು ಜೆಡಿಎಸ್ ಟಿಕೆಟ್ನ ಪ್ರಭಲ ಆಕಾಂಕ್ಷಿಯಾಗಿದ್ದೇನೆ. ವರಿಷ್ಠರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಲು ಕಾರ್ಯಕರ್ತರೊಂದಿಗೆ ಉಮ್ಮಡಹಳ್ಳಿ ಗೇಟ್ನಿಂದ ಕಿರಗಂದೂರು ವೃತ್ತದವರೆಗೆ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ರ್ಯಾಲಿ ನಡೆಸಲು ಮಾರ್ಚ್ 31ರಂದು ಜಿಲ್ಲಾಧಿಕಾರಿಯಿಂದ ಅನುಮತಿ ಪಡೆಯಾಲಾಗಿತ್ತು. ಆದರೆ, ಜಿಲ್ಲಾಧಿಕಾರಿ ಶನಿವಾರ ರಾತ್ರಿ 10 ಗಂಟೆಗೆ ಬೈಕ್ ರ್ಯಾಲಿ ರದ್ದು ಮಾಡುವಂತೆ ನಿರ್ದೇಶನ ನೀಡಿದರು. ಆದರೆ, ಕಾರ್ಯಕರ್ತರಿಗೆ ರಾತ್ರಿ ವೇಳೆ ರ್ಯಾಲಿ ರದ್ದಾದ ವಿಚಾರ ತಿಳಿಸಲಿಲ್ಲ. ಭಾನುವಾರ ಬೆಳಿಗ್ಗೆ ಬಂದ ಕಾರ್ಯಕರ್ತರರೊಂದಿಗೆ ಯಾವುದೆ ರಸ್ತೆ ತಡೆ ಮಾಡದೆ ಶಾಂತಿಯುತವಾಗಿ ಬೈಕ್ ಸಂಚಾರ ಮಾಡಲು ಮುಂದಾದೆವು. ಆದರೂ, ರಾಜಕೀಯ ಪ್ರೇರಿತವಾಗಿ ಪೊಲೀಸರು ವಾಹನ ಜಪ್ತಿ ಮಾಡಿದ್ದಾರೆ’ ಎಂದು ಪ್ರಭಾ ಹೇಳಿದರು. ಶಕುಂತಲಾ, ಮಂಗಳಾ, ಸರೋಜಮ್ಮ ಇದ್ದರು.