ಯಲ್ಲಾಪುರ ಕೊರಚರಹಟ್ಟಿಯ ಉಮೇಶ ಕವಾಡಿ, ಮೆಂಡ್ರಿಗುತ್ತಿ ಮಂಜಪ್ಪ, ಸೊರಬ ತಾಲ್ಲೂಕು ಆನವಟ್ಟಿ ಗ್ರಾಮದ ಗದಿಗೆಪ್ಪ ಬಂಧಿತರು. ಡಿ.12ರಂದು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಶ್ಯಾನಾಡ್ರಹಳ್ಳಿಯ ಗ್ರಾಮ ಪಂಚಾಯಿತಿ ಸದಸ್ಯ ಎಸ್.ಎಂ.ರಾಜೇಂದ್ರ ಎಂಬುವವರನ್ನು ಸೇವಾನಗರ ಕ್ರಾಸ್ ಬಳಿ ಕರೆಯಿಸಿಕೊಂಡು, ನಕಲಿ ಬಂಗಾರ ತೋರಿಸಿ ₹ 2.05 ಲಕ್ಷ ದೋಚಿಕೊಂಡು ಪರಾರಿಯಾಗಿದ್ದರು.