‘ಎರಡನೇ ಅವಧಿಗೆ ಮಹಾಸಭಾ ಅಧ್ಯಕ್ಷರಾಗಿ ಶಾಮನೂರು ಆಯ್ಕೆಯಾಗಿರುವುದು ವೀರಶೈವ ಲಿಂಗಾಯತ ಸಮಾಜದ ಪುಣ್ಯ. ಸಮಾಜದಲ್ಲಿ ಬಿರುಗಾಳಿ ಬೀಸಿದಾಗ ಶಾಮನೂರು ಬದಲು ಬೇರೆ ಯಾರೇ ಮಹಾಸಭಾದ ಅಧ್ಯಕ್ಷರಾಗಿದ್ದರೂ ಸಮಾಜದ ಸ್ಥಿತಿ ಏನಾಗುತ್ತಿತ್ತೋ ಗೊತ್ತಿಲ್ಲ. ಈ ಗಾಳಿ ತಣ್ಣಗಾಗುವವರೆಗೂ ಮಹಾಸಭಾದ ಅಧ್ಯಕ್ಷರಾಗಿ ಅವರೇ ಮುಂದುವರಿಯಬೇಕು ಎಂಬುದು ಪೀಠದ ಆಶಯವಾಗಿತ್ತು’ ಎಂದು ಸ್ವಾಮೀಜಿ ಹೇಳಿದರು.