ದಾವಣಗೆರೆ: ಮಹಾಮಾರಿ ಕೋವಿಡ್–19 ರೋಗವನ್ನು ದೇಶದಲ್ಲಿ ನಿಯಂತ್ರಿಸಲು ಕೇಂದ್ರ ಸರ್ಕಾರ ಸಮರೋಪಾದಿಯಲ್ಲಿ ಕೈಗೊಂಡಿರುವ ಪರಿಹಾರ ಕಾರ್ಯಕ್ಕೆ ನೆರವಾಗುವ ಉದ್ದೇಶದಿಂದ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ನಿಧಿಯಿಂದ ₹ 1 ಕೋಟಿ ಅನ್ನು ಸಂಸದ ಜಿ.ಎಂ. ಸಿದ್ದೇಶ್ವರ ನೀಡಿದ್ದಾರೆ.
ಇದರ ಜೊತೆಗೆ ವೈಯಕ್ತಿಕವಾಗಿ ₹ 2 ಲಕ್ಷವನ್ನು ದೇಣಿಗೆಯಾಗಿ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದಾರೆ.