‘ಯೋಗೀಶ್, ನಾನು ಅಲ್ಲದೇ ರಮೇಶ್ ಬಾಬು, ಶ್ಯಾಗಲೆ ಶಾಂತಕುಮಾರ್, ಸುನಿಲ್ ಬೆಳವನೂರು, ಅಭಿಜಿತ್ ಬೆಳವನೂರು, ಸಚಿನ್, ಪ್ರದೀಪ್, ಲೋಹಿತ್, ಯತಿರಾಜ್, ಶ್ರೀಧರ್, ಅರುಣ್, ನವೀನ್ ಸಹಿತ ಅನೇಕರು ಮುತುವರ್ಜಿ ವಹಿಸಿದ್ದಾರೆ. ಕೆಲವು ದಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾವು ಒಯ್ದ ಊಟ ಸಾಕಾಗದೇ ಮತ್ತೆ ತಯಾರಿಸಿ ನೀಡಿದ್ದಿದೆ. ಸಂಜೆ ಹೊತ್ತಿಗೂ ಕೊಟ್ಟಿದ್ದೆವು. ಈಗ ಕೆಲವು ಜಿಲ್ಲೆಗಳಲ್ಲಿ ಅನ್ಲಾಕ್ ಆಗಿರುವುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಷ್ಟೊಂದು ಬೇಡಿಕೆ ಇಲ್ಲ. ಆದರೆ ಈಗ ಚೆಕ್ಪೋಸ್ಟ್ಗಳಲ್ಲಿ ಪೊಲೀಸರ ಸಂಖ್ಯೆ ಜಾಸ್ತಿಯಾಗಿದೆ. ಅಲ್ಲದೇ ಆಹಾರಕ್ಕಾಗಿ ಪರದಾಡುವ ಬಡವರಿಗೆ, ಟೆಂಟ್ನಲ್ಲಿರುವವರಿಗೆ ಆಹಾರ ನೀಡುತ್ತಿದ್ದೇವೆ’ ಎಂದು ವಿವರಿಸಿದರು.