ಸುದ್ದಿ ತಿಳಿದ ತಂಗಿ ಸುಶೀಲಮ್ಮ ಮಂಗಳವಾರ ಬೆಳಿಗ್ಗೆ ದರ್ಶನ ಮಾಡುತ್ತಿದ್ದ ವೇಳೆ ಅಸ್ವಸ್ಥರಾದರು. ಕೂಡಲೇ ಹೊನ್ನಾಳಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು. ಮೃತರು ಶಿವಮೊಗ್ಗ ಜಿಲ್ಲೆಯ ಚಿನ್ನಿಮನೆ ಗ್ರಾಮದ ಮಾಜಿ ಸೈನಿಕ ಸುರೇಶ್ ಅವರ ಪತ್ನಿ. ಇಬ್ಬರ ಅಂತ್ಯಕ್ರಿಯೆ ಸ್ವಗ್ರಾಮದ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.