ರಜೆಯ ಮೇಲೆ ಬಂದಿದ್ದ ದೇವರಾಜ್ ಶುಕ್ರವಾರ ರಾತ್ರಿ 11 ಗಂಟೆಯ ಹೊತ್ತಿಗೆ ಪ್ರಕಾಶ್ ಅವರ ಮನೆಯ ಬಳಿ ಬಂದು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಬಳಿಕ ಮನೆಯ ಬಾಗಿಲು ಬಡಿದಿದ್ದಾನೆ. ಬಾಗಿಲು ತೆಗೆಯುತ್ತಿದ್ದಂತೆ ಪ್ರಕಾಶ್ ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದಾನೆ. ಒಂದು ಗುಂಡು ಹೊಟ್ಟೆ ಹಾಗೂ ಇನ್ನೊಂದು ಎದೆಯ ಬಳಿ ತಗುಲಿದೆ. ಹೀಗಿದ್ದರೂ ಪ್ರಕಾಶ್ ಅವರು ದೇವರಾಜ್ನನ್ನು ಬೆನ್ನಟ್ಟಿ ಸುಮಾರು 150 ಮೀಟರ್ ದೂರಕ್ಕೆ ಹೋಗಿದ್ದಾರೆ. ಆದರೆ, ಬಳಿಕ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ಬಳಿಕ ಅವರಿಗೆ ಹೊನ್ನಾಳಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಒಯ್ಯಲಾಯಿತು.